Thursday, May 20, 2021

ಭಾವನ ಋಷಿ - ಭೃಗು ವಂಶೋದ್ದಾರಕ



ಭಾವನ ಋಷಿ - ಭೃಗು ವಂಶೋದ್ದಾರಕ, ಮಾರ್ಕಂಡೇಯ ಪುತ್ರ, ಶ್ರೀ ಮನ್ ನಾರಾಯಣ ಅಂಶ ಉಳ್ಳ ಭಾವನಾರಾಯಾಣ ಎಂದು ಕರೆಯಲ್ಪಡುವ, ಶ್ರೀ ವೇದಶಿರ/ ಶ್ರೀ ಭಾವ ನಾರಾಯಣ ಸ್ವಾಮಿ/ ಶ್ರೀ ಭಾವಾನಾ ಋಷಿ ಹಲವಾರು ಹೆಸರುಗಳಲ್ಲಿ ಇವರನ್ನ ಗುರುತಿಸಲಾಗುತ್ತದೆ.

- ಪಿ.ಎಸ್.ರಂಗನಾಥ. ರಾಂಪುರ.

ಶ್ರೀಮನ್ನಾರಾಯಣನ ಅಂಶವುಳ್ಳ ಭೃಗು ಕುಲದ ಉದ್ದಾರಕ ಭೃಗು ಮಹರ್ಷಿಯ ಮರಿ ಮೊಮ್ಮಗ. ಶ್ರೀ ಮಾರ್ಕಂಡೇಯ ಅವರ ಪುತ್ರ, ಪ್ರಪ್ರಥಮ ವಸ್ತ್ರ ಸೃಷ್ಟಿ ಕರ್ತ ಬ್ರಹ್ಮ ಲೋಕ ಶಿವನ ಕೈಲಾಸ ವಿಷ್ಣುವಿನ ವೈಕುಂಠಕ್ಕೆ ಮತ್ತು  ಸೌರಮಂಡಲದ ಜಗತ್ತಿಗೆ ಸಶರೀರದೊಂದಿಗೆ  ಹೋಗಬಲ್ಲ ಮಹಾ ತಪೋ ಸಂಪನ್ನನಾದ  ಭಾವನಾ ಮಹರ್ಷಿ ಜಯಂತಿ ಮಹೋತ್ಸವದ ಪರ್ವದಿನ ಇಂದು.

ಸಕಲ ದೇವರುಗಳಿಗೆ ಮತ್ತು ಸಕಲ ಮಾನವರಿಗೆ ನಗ್ನತ್ವದಿಂದ  ವಿಮುಕ್ತಿಗೊಳಿಸಲು ಶ್ರೀ ಮಹಾವಿಷ್ಣುವಿನ ನಾಭಿಕಮಲದಿಂದ ತಂತುಗಳನ್ನ ಪಡೆದು ವೇದ ಜ್ನಾನದಿಂದ (ಮಗ್ಗ) ಯಂತ್ರವನ್ನು ನಿರ್ಮಿಸಿ ವಸ್ತ್ರ ನಿರ್ಮಾಣಕ್ಕಾಗಿ ಮಣಿಪುರ ಎನ್ನುವ ಪ್ರತ್ಯೇಕ ಗೃಹ ನಿರ್ಮಿಸಿ, ಚೈತ್ರ ಶುದ್ಧ ಪಂಚಮಿ ದಿನದಂದು, ಮೊಟ್ಟ ಮೊದಲ ಬಾರಿಗೆ ಅತ್ಯುತ್ತಮ ದರ್ಜೆಯ ಉಡುಪುಗಳನ್ನು ತಯಾರಿಸಿ  ಮೊದಲು ವಿಘ್ನೇಶ್ವರನಿಗೆ ಸಲ್ಲಿಸಲಾಯಿತು


ವಿಘ್ನ ನಿವಾರಕನ ಆಶೀರ್ವಾದ ಪಡೆದ ನಂತರ ಶ್ರೀ ಲಕ್ಷ್ಮಿ ನಾರಾಯಣರಿಗೆ ವಸ್ತ್ರಗಳನ್ನು ಸಮರ್ಪಿಸಿದರು. ಅವರು ಸಂತೋಷಗೊಂಡು ಸಕಲ ಸಂಪತ್ತನ್ನೆಲ್ಲಾ ದಯಪಾಲಿಸಿ ಪದ್ಮಬ್ರಹ್ಮ, ಪದ್ಮಶಾಲಿ,  ಬಹೋತ್ತಮ, ಪದ್ಮಶಾಖಿ ಎನ್ನುವ ಬಿರುದುಗಳನ್ನ ನೀಡಿದರು.


ಚತುರ್ಮುಖ ಬ್ರಹ್ಮ ಮತ್ತು ಸರಸ್ವತಿಯವರಿಗೆ ವಸ್ತ್ರಗಳನ್ನು ಅರ್ಪಿಸಿದರೆ,  ಅವರು 64 ವಿದ್ಯೆಗಳನ್ನು, ಅಖಂಡ ಬ್ರಹ್ಮಜ್ನಾನವನ್ನು ಕೊಡುಗೆಯಾಗಿ ನೀಡಿದರು.


ನಂತರ ಶಿವ ಪಾರ್ವತಿಯವರಿಗೆ ವಸ್ತ್ರಗಳನ್ನ ಸಮರ್ಪಿಸಲಾಯಿತು, ಪಾರ್ವತೀ ದೇವಿ ಮೃತಾ ಸಂಜೀವನಿ ವಿದ್ಯಾ, ಶಾಂಭವಿ ವಿದ್ಯೆ ಗಳನ್ನು ಅನುಗ್ರಹಿಸಿದರು. 


ಪರಮಶಿವನು ವಸ್ತ್ರದ ಬದಲಾಗಿ, ಹುಲಿ ಚರ್ಮವನ್ನು ಕೇಳಿದನು, ಸೂರ್ಯಪುತ್ರಿ  ಭದ್ರಾವತಿ ದೇವಿಯೊಂದಿಗೆ ಹುಲಿ ಚರ್ಮವನ್ನು ತಂದು ಪರಮೇಶ್ವರನಿಗೆ ಹುಲಿ ಚರ್ಮದ ವಸ್ತ್ರವನ್ನು  ಮಾಡಿಕೊಟ್ಟರು.


ಅದೇರೀತಿ, ಸಕಲ ದೇವರಿಗೂ ವಸ್ತ್ರಗಳನ್ನ ಸಮರ್ಪಿಸಿದರು. ಅವರೆಲ್ಲರೂ, ಮೂವತ್ತಾರು ಬಿರುದುಗಳನ್ನ ಕೊಟ್ಟು ಗೌರವಿಸಿದರು.


ಮಹಾವಿಷ್ಣು ವು "ವೇದಶೀರ/ಭಾವನಾ ಋಷಿಗೆ" ನೂರು ಪದ್ಮಗಳನ್ನು ನೀಡಿ ಅವುಗಳ ಪ್ರಸಾದದೊಂದಿಗೆ  ನೂರು ಜನ ಋಷಿಮುನಿಗಳ ಸಂತಾನವನ್ನು ನೀವು ಹೊಂದಿರಿ ಎಂದು ಅನುಗ್ರಹಿಸಿದರು.


ಅಜರಾಶ್ಚಟಾಯೋ ಪುತ್ರ

ಪೌತ್ರಾಶ್ಚ  ಬಹುವೋ ಭವನ್!

ಮಾರ್ಕಂಡೇಯ ಸಮಾಖ್ಯಾತಃ

ಋಷಯೋ ರಿಷಾಯೋ ವೇದ ಪಾರಂಗತ !!


ಭಾವನಾರಾಯಣನ ಸಂತಾನವು ಮಾರ್ಕಂಡೇಯ ನಂತೆ ಅಖಂಡ ಮೇಧಾವಿಗಳಾಗಿ ಋಷಿಗಳು, ವೈದಿಕ ವಿದ್ವಾಂಸರು, ಭೃಗು ಬ್ರಾಹ್ಮಣ ಪದ್ಮಶಾಲಿ ವಂಶದ ಮೂಲ ಪುರುಷರಾದರು.


ಶ್ರೀ ಭಾವನಾರಾಯಣ ಧರ್ಮಪತ್ನಿ ಸೂರ್ಯ ಪುತ್ರಿ ಭದ್ರಾವತಿ ದೇವಿ ಸಮೇತ  ಕಾಲವಾಸುರ ನೊಂದಿಗೆ ಅತ್ಯಂತ ಭಯಾನಕ ಯುದ್ಧದಲ್ಲಿ "ಶ್ರೀ ಮನ್ ನಾರಾಯಣ ಅಸ್ತ್ರವನ್ನು"  ಉಪಯೋಗಿಸಿ ಕಾಲವಾಸುರನನ್ನ ಸಂಹರಿಸಿದರು.


ಭಗವಾನ್ ವಿಷ್ಣುವು ಪ್ರತ್ಯಕ್ಷರಾಗಿ,


ಯುವಾಂತು ಪದ್ಮಕೋಶಿಯೈಃ

ಪೂಜ್ಯ ದ್ವಿಜಾದಿಭಿ

ಯೌವೈನಾ ಪೂಜ್ಯತೆ ತೌತು

ಮಮ ದ್ರೋಹಿ ಭವೇಧೃವಂ


ಓ ಭಾವನಾರಾಯಣ!

ನಾನು ನಿಮಗೆ ವಚನ ನೀಡುತಿದ್ದೇನೆ. ಭೃಗು ವಂಶದಲ್ಲಿ ಜನಿಸಿದವರೆಲ್ಲರೂ ಅವರು ನನ್ನ ವಂಶದವರೇ ಆಗಿರುತ್ತಾರೆ. ನನ್ನ ಧರ್ಮವೇ ಅವರ ಧರ್ಮವು. ನನ್ನನ್ನು ಪೂಜಿಸುವವರು, ನಿನ್ನನ್ನೂ ಸಹ ಆರಾಧಿಸುತ್ತಾರೆ.

No comments:

Post a Comment