Monday, April 19, 2021

ಮಾರ್ಕಂಡೇಯ ಪರ್ವತ - ವಕ್ಕಲೇರಿ


ಚಿನ್ನದ ನಾಡು ಕೋಲಾರ ಜಿಲ್ಲೆಯಲ್ಲಿರುವ ಪುರಾತನ ಪುಣ್ಯಕ್ಷೇತ್ರ ವಕ್ಕಲೇರಿ. ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾದ ರಮಣೀಯ ಮಾರ್ಕಂಡೇಶ್ವರಸ್ವಾಮಿ ಬೆಟ್ಟವಿದೆ. ಬೆಟ್ಟಕ್ಕೆ ಈ ಹೆಸರು ಬರಲು ಕಾರಣ ಬೆಟ್ಟದ ಮೇಲಿರುವ ಶ್ರೀ ಮಾರ್ಕಂಡೇಶ್ವರಸ್ವಾಮಿಯ ಬೃಹತ್ ದೇವಾಲಯ.

ಬಿಳಿಬೆಟ್ಟ ಭೃಗು ವಂಶಿಯಾದ ಭಾರ್ಗವ ಮಾರ್ಕಂಡೇಯ ನದಿಯ ಉಗಮ ಸ್ಥಾನವಾಗಿದ್ದು, ಬಂಗಾರಪೇಟೆ ತಾಲ್ಲೂಕು ಬೂದಿಕೋಟ ಬಳಿ ಶ್ರೀ ಮಾರ್ಕಂಡೇಯ ಜಲಾಶಯವೇ ಇದೆ.

ವಕ್ಕಲೇರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಆರಾಧ್ಯ ದೈವವಾಗಿ ಹಾಗೂ ಭಾರ್ಗವ ಪದ್ಮಶಾಲಿ ಜನಾಂಗದ ಕುಲದೈವವಾದ ಮಾರ್ಕಂಡೇಶ್ವರ ಸ್ವಾಮಿ ಅವತಾರದ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ.

ಬ್ರಹ್ಮ ಮಾನಸ ಪುತ್ರನಾದ ಭೃಗು ಮಹರ್ಷಿಯ ವಂಶಸ್ಥನಾದ ಮೃಕಂಡು ಮಹಾಮುನಿ ಹಾಗೂ ಮರುಧ್ವತಿ ದೇವಿ ದಂಪತಿಗೆ ಬಹಳ ಕಾಲ ಮಕ್ಕಳಿಲ್ಲದಿದ್ದರಿಂದ ಮೃಕಂಡು ಪುತ್ರಾರ್ಥಿಯಾಗಿ ಪರಮೇಶ್ವರನನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗಿ ಜ್ಞಾನಿಯೂ ದೈವಭಕ್ತನೂ ಆದ ಅಲ್ಪಾಯುಷಿ ಮಗ ಬೇಕೋ ಅಥವಾ ದೀರ್ಘಾಯುಷಿಯಾದ ಲೋಕಕಂಟಕನಾದ ಮಗ ಬೇಕೋ ಎಂದು ಕೇಳಿದಾಗ, ಮೃಕಂಡು ಅಲ್ಪಾಯುಷಿಯಾದರೂ ಜ್ಞಾನಿಯಾದ ಮಗನೇ ಬೇಕೆನ್ನುತ್ತಾನೆ. ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯ.[೧]

ತಾನು ಅಲ್ಪಾಯು ಎಂದು ತಿಳಿದ ಭಾರ್ಗವ ಮಾರ್ಕಂಡೇಯ, ತನ್ನ ತಂದೆ, ತಾಯಿಗಳ ಸಂತುಷ್ಟಿಗಾಗಿ ಶಿವನನ್ನು ಕುರಿತು ತಪವನ್ನಾಚರಿಸುತ್ತಾನೆ. ಆತನ ಆಯುಶ್ ಮುಗಿದ ದಿನ ಈಗಿನ ವಕ್ಕಲೇರಿಯ ಬೆಟ್ಟದ ಶಿಖರದಲ್ಲಿ ಮಾರ್ಕಂಡೇಯ ಶಿವಪೂಜೆಯಲ್ಲಿದ್ದಾಗ, ಅವನ ಪ್ರಾಣ ಕೊಂಡೊಯ್ಯಲು ಬಂದ ಯಮಧರ್ಮ, ಅವನ ಕೊರಳಿಗೆ ಪಾಶ ಹಾಕಿದಾಗ ಮಾರ್ಕಂಡೇಯ ಶಿವಲಿಂಗ ತಬ್ಬಿ ಹಿಡಿಯುತ್ತಾನೆ. ಯಮ ಬಲವಂತ ಮಾಡಿ ಎಳೆದಾಗ, ಲಿಂಗದಿಂದ ಕೋಪವಿಷ್ಟನಾಗಿ ಎದ್ದ ಶಿವ,ತನ್ನ ತ್ರಿಶೂಲದಿಂದ ಯಮನನ್ನೇ ಕೊಲ್ಲಲು ಮುಂದಾಗುತ್ತಾನೆ. ನಂತರ ಶಾಂತನಾಗಿ ಮಾರ್ಕಂಡೇಯನಿಗೆ ಚಿರಂಜೀವಿಯಾಗೆಂದು ವರ ನೀಡುತ್ತಾನೆ.

ಯಮನನ್ನು ಗೆದ್ದು ಚಿರಂಜೀವಿಯಾದ ಭಾರ್ಗವ ಮಾರ್ಕಂಡೇಯನನ್ನು ರಕ್ಷಿಸಲು ಭುವಿಯಲ್ಲಿ ಅವತರಿಸಿದ ಶಿವ ಇದೇ ಬೆಟ್ಟದಲ್ಲಿ ಮಾರ್ಕಂಡೇಶ್ವರನಾಗಿ ಬೆಟ್ಟವೇರಿ ಬರುವ ಭಕ್ತರನ್ನು ಸಲಹುತ್ತಿದ್ದಾನೆ.

ಮಾರ್ಕಂಡೇಯನಿಗೆ ಯಮನ ಪಾಶದಿಂದ ವಿಮುಕ್ತಿಗೊಳ್ಳುವ ವರ ನೀಡಿದ ಕಾರಣದಿಂದ ಇದಕ್ಕೆ ‘ ವರಪುರಿ “ ಎಂದು ಹೆಸರು ಬಂತು ಎಂದು ಸ್ಕಾಂದ ಪುರಾಣದಲ್ಲಿ ಉಲ್ಲೇಖವಿದೆ. ಕ್ರಮಕಪುರಿ ಎಂದೂ ಕರೆಸಿಕೊಂಡಿದ್ದ ಈ ಊರು ನಂತರ ವಕ್ಕಲೇರಿಯಾಯಿತು ಎಂದು ಸ್ಥಳೀಯರು ಹೇಳುತ್ತಾರೆ.

ಈ ದೇವಾಲಯವು ವಿಶಾಲವಾದ ಏಕಶಿಲಾ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಈ ಬೃಹತ್ ವಿಶಾಲವಾದ ಬಂಡೆಯಲ್ಲಿ ಒಂದು ಅಡಿ ಅಗಲದ ಸುಮಾರು ಉದ್ದವಾದ ಕಪ್ಪಾದ ಪಟ್ಟಿಯು ಬಂಡೆಯ ದಕ್ಷಿಣ ಪಾರ್ಶ್ವದಿಂದ ಗರ್ಭಾಂಕಣದವರೆಗೆ ಬಂಡೆಯಲ್ಲಿ ಮೂಡಿ ಬಂದಿದೆ. ಇದರ ಬಗ್ಗೆ ಯಮಧರ್ಮರಾಯನು ಮಾರ್ಕಂಡೇಯನಿಗೆ ಯಮಪಾಶವನ್ನು ಹಾಕಿ ಎಳೆದ ಕುರುಹುಗಳು ಬೆಟ್ಟದ ಮೇಲಿರುವ ಬಾವಿಯಲ್ಲಿ ಇಂದಿಗೂ ಕಾಣಿಸುತ್ತದೆ ಎನ್ನಲಾಗುತ್ತದೆ. ಯಮ ಬಂದು ಎಳೆದಾಗ ಮಾರ್ಕಂಡೇಯ ಶಿವಲಿಂಗವನ್ನು ಕೈಗಳಿಂದ ತಬ್ಬಿ ಹಿಡಿದಾಗ ಮೂಡಿತೆನ್ನಲಾದ ಉಗುರಿನ ಗುರುತುಗಳು ಶಿವಲಿಂಗದ ಮೇಲಿವೆ.

೧೨ನೇ ಶತಮಾನದ ಆದಿಯಲ್ಲಿ ಪ್ರಾರಂಭವಾದ ದೇವಾಲಯ ನಿರ್ಮಾಣ ಕಾರ್ಯ ೧೬ನೇ ಶತಮಾನದವರೆವಿಗೆ ನಡೆಯಿತೆಂಬುದು ಇತಿಹಾಸದಿಂದ ವೇದ್ಯವಾಗುತ್ತದೆ. ಚೋಳರು, ವಿಜಯನಗರದ ಅರಸರು ದೇವಾಲಯ ಅಭಿವೃದ್ಧಿ ಪಡಿಸಿದ್ದಾರೆ. ಇತ್ತೀಚೆಗೆ ೧೯೭೦ರಲ್ಲಿ ಶ್ರೀ ಪಟೇಲ್ ವೆಂಕಟರಾಮೇಗೌಡ ರವರು ಶ್ರಮವಹಿಸಿ ಬೆಟ್ಟ ಹತ್ತಿಬರಲು ಸುಲಭವಾದ ಮೆಟ್ಟಲುಗಳನ್ನು ನಿರ್ಮಿಸಿದ್ದಾರೆ.[೨]


೧೯೮೮ರಲ್ಲಿ ದೇವಾಲಯಕ್ಕೆ ಗೋಪುರ ನಿರ್ಮಾಣ ಕಾರ್ಯ ಆರಂಭವಾಗಿ, ೧೯೯೦ರಲ್ಲಿ ಅನಾವರಣಗೊಂಡಿತು. ಈ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ನೀಲಂ ಸಂಜಿವರೆಡ್ಡಿ ಮತ್ತಿತರರು ಪಾಲ್ಗೊಂಡಿದರು. ೧೯೮೭ರಲ್ಲಿ ಕೆಲವು ಕಿಡಿಗೇಡಿಗಳು ಇಲ್ಲಿದ್ದ ಪುರಾತನ ಸುಬ್ರಮಣ್ಯ, ಪಾರ್ವತಿ, ಗಣಪತಿ ಹಾಗೂ ಶ್ರೀವಳ್ಳಿ ವಿಗ್ರಹಗಳನ್ನು ಭಗ್ನಗೊಳಿಸಿದಾಗ, ವೇಮಗಲ್ ಶಾಸಕರಾಗಿದ್ದ ಶ್ರೀ ಬೈರೇಗೌಡರು ಹೊಸ ವಿಗ್ರಹಗಳನ್ನು ಕೆತ್ತನೆ ಮಾಡಿಸಿ, ೧೯೯೦ರಲ್ಲಿ ಪುನರ್ ಪ್ರತಿಷ್ಠೆ ಮಾಡಿಸಿದರು. ಈ ದೇವಸ್ಥಾನಕ್ಕೆ ಮಹಾದ್ವಾರ, ಬಹೃತ್ ವಿಶಾಲವಾದ ಬಸವಮಂಟಪ, ಕಲ್ಯಾಣ ಮಂಟಪ, ಸುಖನಾಸಿ, ನವರಂಗ, ಯಾಗ ಮಂಟಪ, ಗರ್ಭಾಂಕಣವಿದೆ. ವಿಶಾಲ ಪ್ರಕಾರದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಮೂಲಸ್ಥಾನದ ಸುತ್ತಲೂ ವೀರಭದ್ರಸ್ವಾಮಿ, ಸಪ್ತಮಾತೃಕೆಯರು, ವಿಘ್ನೇಶ್ವರಸ್ವಾಮಿ, ಸುಬ್ರಹ್ಮಣ್ಯೇಸ್ವಾಮಿ, ಪ್ರಸನ್ನ ಪಾರ್ವತಾದೇವಿ ಅಮ್ಮನವರು, ಚಂಡಿಕೇಶ್ವರಸ್ವಾಮಿ, ವೆಂಕಟರಮಣ ಸ್ವಾಮಿ, ಕಾಲಭೈರವಸ್ವಾಮಿ ದೇವರುಗಳ ಗುಡಿಗಳಿವೆ.


ನವರಂಗದಲ್ಲಿರುವ ದ್ವಾರ ಪಾಲಕರ ವಿಗ್ರಹಗಳು ಗಮನಸೆಳೆಯುವಂತಿವೆ. ಈ ದೇವಾಲಯದ ಕಲ್ಯಾಣ ಮಂಟಪ ಹಾಗೂ ನವರಂಗದಲ್ಲಿರುವ ಕಂಬಗಳು ಅತಿ ಸುಂದರವಾದ ಸೂಕ್ಷ್ಮ ಕೆತ್ತನೆಯಿಂದ ಮನಸೂರೆಗೊಳ್ಳುತ್ತವೆ.

ಮಹಾ ಶಿವರಾತ್ರಿ ದಿನ ಎರಡು ದಿನ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವ ಹಾಗೂ ಪದ್ಮಶಾಲಿ ಸಮಾಜದವರಿಂದ ಧ್ವಜಾರೋಹಣ, ಪರಮೇಶ್ವರನಿಗೆ ನಡೆಯುವ ಹತ್ತು ತಲೆ ಇಪ್ಪತ್ತು ಕೈಗಳ ರಾವಣ ವಾಹನೋತ್ಸವ ವಕ್ಕಲೇರಿ ಗ್ರಾಮದಲ್ಲಿ ನೆರವೇರುತ್ತದೆ. ಇದನ್ನು ನೋಡಲು ಎರಡು ಕಣ್ಣು ಸಾಲದು ಎಂದರೆ ಅತಿಶಯೋಕ್ತಿಯಲ್ಲ. ಆಷಾಡ ಶುದ್ಧ ತದಿಗೆಯಂದು ಬೆಟ್ಟದ ಮೇಲೆ ಶ್ರೀ ಮಾರ್ಕಂಡೇಯಸ್ವಾಮಿಯ ಜಯಂತಿ ನಡೆಯುತ್ತದೆ.

ಈ ದೇವಾಲಯದ ಬೆಟ್ಟದ ಸುತ್ತಲೂ ೧೭೩೦ ಎಕರೆ ಜಮೀನು ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದು, ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದೆ.ಈಗ ಶ್ರೀ ಮಾರ್ಕಂಡೇಶ್ವರ ದೇವಾಲಯ ಅಭಿವೃದ್ದಿ ದತ್ತಿ (ರಿ) ರವರು ದೇವಾಲಯದ ಅಭಿವೃದ್ದಿ ಕಾರ್ಯಗಳು ಹಾಗೂ ನಿತ್ಯ ಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ದೇವಾಲಯ ಹಿಂಭಾಗದ ಸುಮಾರು ೩ ಪರ್ಲಾಂಗ್ ದೂರದಲ್ಲಿ ಬಿಳಿ ಬೆಟ್ಟವಿದ್ದು ಇಲ್ಲಿ ವೀರಾಂಜನೇಯ ದೇವಾಲಯ ಇದೆ. ಈ ಪ್ರದೇಶಕ್ಕೆ ರಾಮಾಯಣ ಕಾಲದಲ್ಲಿ ಲವಕುಶ ಹಾಗೂ ಸೀತಾರಾಮರು ಬಂದಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿಯ ಒಂದು ಗುಹೆಯಲ್ಲಿ ಮಕ್ಕಳು ಮಲಗುವಂತಹ ಶಿಲಾ ತೊಟ್ಟಿಲುಗಳಿದ್ದು, ಇಲ್ಲಿ ಲವಕುಶರು ಮಲಗುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.

ಪದ್ಮಶಾಲಿ ವಂಶವೃಕ್ಷ

 


ಪದ್ಮಪುರಾಣ, ಭಾವನಾಮಹರ್ಷಿ ಪುರಾಣ

 ಮಾರ್ಕಂಡೇಯ ಪುರಾಣವು ಪದ್ಮಶಾಲಿಯವರ ಕುಲಪುರಾಣಕ್ಕೆ ಪದ್ಮಪುರಾಣ, ಮಾರ್ಕಂಡೇಯ ಪುರಾಣ, ಭಾವನಾರ್ಷಿ ಪುರಾಣ, ಭಾವನಾಮಹರ್ಷಿ ಪುರಾಣ, ಮಾರ್ಕಂಡೇಯೋಪಾಖ್ಯಾನ ಎಂಬ ಪರ್ಯಾಯ ಪದಗಳಿವೆ. ಭಾವನಾ ಋಷಿ ಪದ್ಮಶಾಲಿಯವರ ಕುಲದ ೧೦೧ ಗೋತ್ರದವರಿಗೂ ಮೂಲಪುರುಷ. ಇವರ ಕಥೆಯನ್ನು, ಮಹಿಮೆಯನ್ನು, ಪದ್ಮಶಾಲೆ ಕುಲೋತ್ಪತ್ತಿ ವಿಧಾನವನ್ನು, ಕುಲಪ್ರಾಧಾನ್ಯವನ್ನು ವರ್ಣಿಸುವುದೇ ಮಾರ್ಕಂಡೇಯ ಪುರಾಣಕಥೆಯ ಮುಖ್ಯೋದ್ದೇಶ. ಮಾರ್ಕಂಡೇಯ ಪುರಾಣ ಕಥೆಯನ್ನು ಪದ್ಮಶಾಲಿಯವರ ಆಶ್ರಿತಕುಲವಾದ ಕೂನಪುಲಿಯವರು ಪಟದ ಕಥೆಯಂತೆ (ಬಟ್ಟೆಯ ಮೇಲೆ ಚಿತ್ರಗಳ ಮೂಲಕ ತೋರಿಸುವುದು) ಪುರಾಣ ಪ್ರವಚನದಂತೆ ನಿರೂಪಿಸುತ್ತಾರೆ. ಪದ್ಮಶಾಲಿ ಕುಲಪುರಾಣಕ್ಕೆ ಮೂಲ ‘ಮಾರ್ಕಂಡೇಯಪುರಾಣ’ ಎಂದು ಕೂನಪುಲಿ (ಕೂನಹುಲಿ) ಯವರು (ಕಲಾವಿದರು) ವಿವರಿಸುತ್ತಾರೆ.

ಕಥಾವಸ್ತು : ಆದಿಶಕ್ತಿ ಸಕಲಚರಾಚರ ಸೃಷ್ಟಿಯ ಜೊತೆಯಲ್ಲಿ ತ್ರಿಮೂರ್ತಿಗಳನ್ನು ಕೂಡ ಸೃಷ್ಟಿಸುತ್ತಾಳೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನು ಭೃಗು ಮಹರ್ಷಿಯನ್ನು ಸೃಷ್ಟಿಸಿದರೆ, ಅವನಿಗೆ ಕರ್ದಮ ಪ್ರಜಾಪತಿ ಮಗಳಾದ ಖ್ಯಾತಿಯಿಂದ ಧಾತ, ವಿಧಾತ ಎಂಬ ಪುತ್ರರು ಮತ್ತು ಶ್ರೀದೇವಿ ಮಗಳಾಗಿ ಜನಿಸುತ್ತಾರೆ. ಶ್ರೀದೇವಿ ವಿಷ್ಣುವಿಗೆ ಅರ್ಧಾಂಗಿಯಾಗುತ್ತಾಳೆ. ಭೃಗನ ದೊಡ್ಡಮಗ ಧಾತುವಿಗೆ ಮೃಕಂಡನು ಹುಟ್ಟುತ್ತಾನೆ. ಅವನಿಗೆ ಮಾರ್ಕಂಡೇಯ ಜನಿಸುತ್ತಾನೆ. ಮಾರ್ಕಂಡೇಯ ಅಲ್ಪಾಯುಷ್ಯನಾದರೂ ತನ್ನ ಭಕ್ತಿ ತತ್ಪರತೆಯಿಂದ ಶಿವನ ಅನುಗ್ರಹದಿಂದ ದೀರ್ಘಾಯುಷ್ಯನಾಗುತ್ತಾನೆ.


ಸೃಷ್ಟ್ಯಾದಿಯಲ್ಲಿ ಮಾನವರು, ದೇವತೆಗಳು ದಿಗಂಬರರಾಗಿದ್ದರು. ಆ ಕಾಲದಲ್ಲೇ ಕಾಲುವಾಸುರನೆಂಬ ರಾಕ್ಷಸನು ದೇವತೆಗಳನ್ನು ಮಾನವರನ್ನೂ ಹಿಂಸಿಸುತ್ತಿದ್ದನು. ಅವರೆಲ್ಲಾ ಸೇರಿ ಬ್ರಹ್ಮನನ್ನು ಬೇಡಿಕೊಂಡಾಗ, ಬ್ರಹ್ಮ ವಿಷ್ಣುವನ್ನು ಸಲಹೆ ಕೇಳುತ್ತಾನೆ. ವಿಷ್ಣುವು ಮಾರ್ಕಂಡೇಯನಿಗೆ ಧೂಮ್ರಾವತಿಯೊಡನೆ ವಿವಾಹ ಮಾಡಿದರೆ ಅವರಿಗೆ ಹುಟ್ಟುವ ಮಗನೇ ದೇವತೆಗಳಿಗೂ ಮಾನವರಿಗೂ ಉಡುಪುಗಳನ್ನು ತಯಾರಿ ಮಾಡಿಕೊಡುವನೆಂದೂ, ಕಾಳಾಸುರನನ್ನು ಸಂಹರಿಸುವನೆಂದೂ ಹೇಳುತ್ತಾನೆ.

ದೇವತೆಗಳು, ಮಾರ್ಕಂಡೇಯನಿಗೂ, ಧೂಮ್ರವತಿಗೂ ಮದುವೆ ಮಾಡಿಸುತ್ತಾರೆ. ಆ ದಂಪತಿಯರಿಗೆ ಪಂಚವಟಿ, ಭಾವನಾರಾಯಣನೆಂಬ ಕುಮಾರರು ಹುಟ್ಟುತ್ತಾರೆ.

ಭಾವನಾರಾಯಣನೇ ಬೆಳೆದು ದೊಡ್ಡವನಾಗಿ ಶಿವಾನುಗ್ರಾಹದಿಂದ ವಸ್ತ್ರನಿರ್ಮಾಣ ವಿದ್ಯೆಯನ್ನು ಕಲಿಯುತ್ತಾನೆ. ವಿಷ್ಣುವಿನ ನಾಭಿ ಕಮಲದಿಂದ ನೂಲನ್ನು ಗ್ರಹಿಸಿ ದೇವತೆಗಳೆಲ್ಲರಿಗೂ ರೇಷ್ಮೆವಸ್ತ್ರಗಳನ್ನೂ ತಯಾರು ಮಾಡಿಕೊಳ್ಳುತ್ತಾನೆ. ಶಿವನು ಮಾತ್ರ ತನಗೆ ವಸ್ತ್ರಗಳು ಅಗತ್ಯವಿಲ್ಲವೆಂದು ಹುಲಿಚರ್ಮಬೇಕೆಂದು ಕೇಳುತ್ತಾನೆ. ಭಾವನಾರ್ಷಿ ಭದ್ರಾವತೀದೇವಿ (ಭಾರ್ಗವೀದೇವಿ) ಬಳಿ ಇರುವ ಹುಲಿಗಳನ್ನು ತಂದು, ಹುಲಿಚರ್ಮವನ್ನು ಶಿವನಿಗೆ ಅರ್ಪಿಸಿ ಭದ್ರಾವತಿಯನ್ನು ಪರಿಣಯವಾಗುತ್ತಾನೆ. ಸಂತಾನಕ್ಕಾಗಿ ಪುತ್ರ ಕಾಮೇಷ್ಟಿ ಯಾಗ ಮಾಡಿ ೧೦೧ ಜನ ಪುತ್ರರನ್ನು ಪಡೆಯುತ್ತಾನೆ. ಭೂಲೋಕದಲ್ಲಿರುವರಿಗೆಲ್ಲ ಸರಿಹೋಗುವ ವಸ್ತ್ರಗಳಿಗಾಗಿ ಪದ್ಮತಂತಿಗಳನ್ನು ಪ್ರಸಾದಿಸು ಎದು ವಿಷ್ಣುವನ್ನು ಬೇಡಿಕೊಳ್ಳುತ್ತಾನೆ. ವಿಷ್ಣುಭಗವಾನನು ‘ಪದ್ಮತಂತೀ ಬೀಜಗಳನ್ನು’ ಪ್ರಸಾದಿನಿ ಹತ್ತಿಬೆಳೆಸಿ ಅದರಿಂದ ಎಳೆಗಳನ್ನು ತಯಾರಿಸಿ ವಸ್ತ್ರಗಳನ್ನು ತಯಾರಿಸಬೇಕೆಂದು ಆದೇಶಿಸುತ್ತಾನೆ. ಆ ಬೀಜಗಳನ್ನು ಕಾಳುವಾಸುರನು ಅಪಹರಿಸುತ್ತಾನೆ. ಭಾವನಾರ್ಷಿ ‘ಪದ್ಮವಂತುಬೀಜಗಳಿ’ಗಾಗಿ ಕಾಳವಾಸುರನ ಮೇಲೆ ದಾಳಿ ಮಾಡುತ್ತಾನೆ. ಯುದ್ಧದಲ್ಲಿ ಎಷ್ಟು ಸಾರಿ ಭಾವನಾರ್ಷಿ ಕಾಳಾಸುರನನ್ನು ಕೊಂದರೂ ಅವನ ರಕ್ತಬಿಂದುಗಳು ನೆಲದ ಮೇಲೆ ಬಿದ್ದಾಕ್ಷಣ ಪುನರ್ಜೀವಿತನಾಗುತ್ತಿರುತ್ತಾನೆ. ಭದ್ರಾವತಿ ಹತ್ತಿರ ಇರುವ ಹುಲಿಗಳನ್ನು ಯುದ್ಧರಂಗಕ್ಕೆ ಭಾವನಾರ್ಷಿ ಕರೆತಂದಾಗ ಅವು ರಾಕ್ಷಸನ ರಕ್ತವನ್ನು ಭೂಮಿಯ ಮೇಲೆ ಬೀಳದಂತೆ ಕುಡಿಯುತ್ತವೆ. ಕಡೆಗೂ ಕಾಳಾಸುರನನ್ನು ಭಾವನಾರ್ಷಿ ಸಂಹರಿಸಿ, ಅವನ ಶರೀರಾವಯವಗಳಿಂದ ವಸ್ತ್ರಗಳನ್ನು ನೇಯಲಿಕ್ಕೆ ಅಗತ್ಯವಾದ ಸಾಮಗ್ರಿಯನ್ನು ತಯಾರು ಮಾಡಿ ಅವುಗಳನ್ನು ತನ್ನ ೧೦೧ ಜನ ಪುತ್ರರಿಗೊಪ್ಪಿಸಿ ಹೆಂಡತಿಯೊಂದಿಗೆ ತಪಸ್ಸು ಮಾಡಲಿಕ್ಕೆ ಹೋಗುತ್ತಾನೆ. ಅಂದಿನಿಂದ ಭಾವನಾರ್ಷಿ ಸಂತತಿಯವರೇ ವಸ್ತ್ರಗಳನ್ನು ತಯಾರು ಮಾಡುತ್ತಿದ್ದಾರೆ.

ವಿಷ್ಣುನಾಭಿ ಪದ್ಮತಂತುಗಳಿಂದ ವಸ್ತ್ರಗಳನ್ನು ಮಾಡುವುದನ್ನೇ ಕುಲವೃತ್ತಿಯನ್ನಾಗಿಸಿ ಕೊಂಡವರನ್ನು ಪದ್ಮಶಾಲಿಯವರೆಂದು, ಪದ್ಮ ಬ್ರಾಹ್ಮಣರೆಂದು ಕರೆಯುತ್ತಾರೆ. ಮಾರ್ಕಂಡೇಯನ ವಂಶಕ್ಕೆ ಸೇರಿದವರಾಗಿದ್ದರಿಂದ ಮಾರ್ಕಂಡೇಯ ವಂಶಸ್ಥರಾದರು. ಭಾವನಾರ್ಷಿ ೧೦೧ ಪುತ್ರರೊಡನೆ ೧೦೧ ಗೋತ್ರಗಳು ಹುಟ್ಟಿವೆ. ಅವರಿಂದಲೇ ಪದ್ಮಸಾಲಿಯರ ಕುಲವು ಕೂಡ ಅಭಿವೃದ್ದಿಯಾಗಿದೆ.

ಮಾರ್ಕಂಡೇಯ ಪುರಾಣದ ಕಥೆಗಾರರಾದ ಕೂನವುಲಿಯವರ ಪ್ರದರ್ಶನಾ ಪದ್ಧತಿ : ಭಾವನಾರ್ಷಿ ತನ್ನ ಬೆವರಿನಿಂದ ಉದ್ಭವಿಸಿದ ಕೂನಪುಲಿ ಮೂಲಪುರುಷನನ್ನು ಉದ್ದೇಶಿಸಿ “ನೀನು ಪದ್ಮಶಾಲೆಯರ ಜನ್ಮ ವೃತ್ತಾಂತವನ್ನು ಕಥೆಯಾಗಿ ಹೇಳಬೇಕು. ಹೆಡೆಗಳನ್ನೆತ್ತಿಕೊಂಡು ಶಾಸ್ತ್ರವನ್ನು ತಿಳಿಸುತ್ತಾ ‘ಹೆಡೆಯರಾಜನಂತೆ’ ಪದ್ಮಶಾಲಿಯರು ಕೊಡುವ ಬಟ್ಟೆಗಳನ್ನು ಉಟ್ಟುಕೊಂಡು, ಅವರು ಕೊಡುವ ಆಹಾರದಿಂದ ಜೀವಿಸಬೇಕು” ಎಂದು ಶಾಸನ ಮಾಡುತ್ತಾನೆ. ಅಂದಿನಿಂದ ಪದ್ಮಶಾಲಿಯರು ಕೂನಪೂಲಿಯವರನ್ನು ಆದರಿಸುತ್ತಿದ್ದಾರೆ. ಕೂನಪುಲಿಯವರು ಕೂಡ ಮಾರ್ಕಂಡೇಯ ಪುರಾಣ ಕಥೆಯನ್ನು ಚಿತ್ರಿಸಿದ ಪಟವನ್ನು ಪ್ರದರ್ಶಿಸುತ್ತಾ ಆನುವಂಶಿಕವಾಗಿ ಬರುತ್ತಿರುವ ತಮ್ಮ ಮಿರಾಸಿ (ವಂಶಪಾರಂಪರ್ಯ ಹಕ್ಕು) ಹಕ್ಕುಗಳಿಂದ, ಪದ್ಮಶಾಲಿಯರು ಕೊಡುವ ಪದಾರ್ಥಗಳಿಂದ ಬದುಕುತ್ತಿದ್ದಾರೆ.

ಪಟ ಪ್ರದರ್ಶನ : ‘ಕೂನಪುಲಿ’ಯ ಹುಲಿಧ್ವಜ, ವಾದ್ಯಗಳು, ಚಾಮರಗಳಿಂದ ಗ್ರಾಮದಲ್ಲಿನ ಪದ್ಮಶಾಲಿಯ ಕುಲ ನಾಯಕನ ಬಳಿಗೆ ಹೋಗಿ ಪಟ ಪ್ರದರ್ಶನಕ್ಕೆ ಅನುಮತಿಯನ್ನು ಕೇಳುತ್ತಾರೆ. ಪಟಪ್ರದರ್ಶನದಲ್ಲಿ ಐದು ಜನ ಭಾಗವಹಿಸುವರು. ತಬಲಾ, ಹಾರ್ಮೋನಿಯಂ, ತಾಳ, ಢಂಕಾ, ವಾದ್ಯಗಳನ್ನು ಉಪಯೋಗಿಸುವರು. ಪ್ರಧಾನ ಕಥೆಗಾರ ಎಡಗೈಯಿಂದ ಚಿಕ್ಕಮರದ ಹಲಗೆಗಳಿಂದ ವಾದನ ಮಾಡುತ್ತಾ ಬಲಗೈ ತೋರುಬೆರಳಿಂದ ಪಟದಲ್ಲಿನ ಬೊಂಬೆಗಳನ್ನು ತೋರಿಸುತ್ತಾ ಅಭಿನಯಾತ್ಮಕವಾಗಿ ಕಥೆಯನ್ನು ಹೇಳುತ್ತಾರೆ. ಕಥಾನುಸಾರವಾಗಿ ವಚನ, ಪದ್ಯ, ಗೇಯರೂಪದಲ್ಲಿ ಕಥೆಯನ್ನು ಹೇಳುತ್ತಾರೆ. ಕಥಾ ಪರದರ್ಶನದ ಅನಂತರ ಕೂನ ಪುಲಿಯವರು ಮನೆಮನೆಗೆ ಹೋಗಿ ಅವರನ್ನು ಆಶೀರ್ವದಿಸಿ ಅವರು ಕೊಟ್ಟ ಭತ್ಯೆಯನ್ನು ಸ್ವೀಕರಿಸಿ ಹೊರಟುಹೋಗುತ್ತಾರೆ.

ಮಾರ್ಕಂಡೇಯ ಪುರಾಣ ಮೌಖಿಕ ರೂಪದಲ್ಲೇ ಅಲ್ಲದೇ ಲಿಖಿತರೂಪದಲ್ಲಿಯೂ ಲಭ್ಯವಾಗುತ್ತದೆ. ‘ಭಾರ್ಗವೀ ಪರಿಣಯಂ’ ‘ಪದ್ಮಪುರಾಣ’ ಪದ್ಮಶಾಲೀಯರ ಕುಲಯಾಚಕ ಪುರಾಣ’ ಎಂಬ ಹೆಸರುಗಳಿಂದ ಲಿಖಿತ ಪುರಾಣಗಳು ದೊರಕುತ್ತವೆ.

ಅರಿಶಿಣ ಪತ್ತಲ, ಬಿಳಿ ಪತ್ತಲ- ಗೊಂದಲವೇಕೇ

 

ಪದ್ಮಶಾಲಿಗಳೇ ಎಚ್ಚೆತ್ತುಕೊಳ್ಳಿ

 




ಭಾವನಾ ಋುಷಿ ಭದ್ರಾವತಿ ದೇವಿ ಕಲ್ಯಾಣ ಮಹೋತ್ಸವ

 


ಪೊಗಡರಾಜು, ಪಡಗರಾಜು, ಕೂನಪುಲಿ ವಂಶಸ್ಥರು

 


About Padmashalians



Padmashali,  is a Hindu caste residing in the Indian states of Andhra Pradesh, Telangana, Karnataka, Maharashtra, Gujarat and Tamil Nadu. Our traditional occupation is weaving.

The term Padmashali is derived from two words Padma and Sali, The Padma means lotus and Sali means weaver. The word Padma referring to the myth of the thread was a lotus which sprang from the navel of Vishnu.

Another explaination is . The word "Padma" is sahasradala padma, meaning the highest order of human intelligence. In body chakras "Padma" refers to sahasrara. The word "Shali" in Sanskrit is 'be holder'. Thus "Padmashali" literally means holder of sahasrara. In physical term it means intelligence.


History

The Padmasalis support their mythological origins and Puranas such as Kulapurana and Markandeya Purana.

Padmavathi of Mangapura / tiruchanur of Tirupati, the Shasanam of the temple, declares that Padmavathi, is daughter of Padmashali. Hence, the name Padmashali. There exists writing in Tirupati to evidence the statement of Padmavathi as daughter of Padmashali's. Another aspect of Padmashali, Padma also refers to Lotus. The Lotus also refers to the intelligence or awakening of Sahasrara. The word Padma also means lotus thread.

Markandeya Mahamuni was advised by Siva to perform a Hawan to sacrifice. Shri Bhavana Rishi arose from Home Kund, holding a lotus flower Padma in his hand. He is later known as Bhavanarayana.

Bhavna Rishi had two wives, Prasannavati and Bhadravathi, daughters of Surya (The Sun) and chayadevi. who had a hundred and one sons.

Markandeswara conducted Homa for Loka Kalyana at the instance of Srimannarayana (Vishnu).

Srimannarayana given a lotus stem from his nabhimandal to Bhavana Maharshi to weave cloth. Bhavana took up the task and weaved a cloth and gave to Srimannarayana. Narayana pleased with the lotus cloth blessed him that his progenitors of the one hundred and one Gotras be known as PADMASHALIs.

Markandeya gave fifth veda called Padma Veda; fifth petals of lotus flower. Other four petals of lotus are 4 vedas. So family of this caste belong to Padma Sakha and Markandeya Sutra analogous to the Sakhas, Sutras and Gotras of the Brahmans.

The Padmashalis relate their origin to Vrushis, sages as gothras. Hence, Padmashalis caste of Brahminical not by birth but by deeds. Each family has separate gothras. The family name and gothras will be referred at the time of marriage and sagothras and like family name are barred in going in for marriage.

All Padmasalis claim Rishi gothras of 101 rishi "santhathi" who were taken on adoption by the sage Bhavana Rishi, who himself was taken on adoption by Rishi Markandeya.

All Padmasalis originated from Satavahana empire and their mother tongue remains Telugu, except for a few migrants who had taken longer and numerous stages of migration such as the Shettigars of Dakshina Kannada. Most Padmashalis in Tamil Nadu, Karnataka, Maharashtra, Chatttisgadh, Madhya Pradesh and Orissa speak Telugu as mother tongue.


ಪದ್ಮಶಾಲಿಗಳು ನಾವು