Saturday, May 22, 2021

ಭೃಗು ಮಹರ್ಷಿ ಜಯಂತಿ

ಪದ್ಮಶಾಲಿ ಸಮಾಜದ ಮೂಲ ಪುರುಷ ಭೃಗು ಮಹರ್ಷಿ


ಇಂದು ವೈಶಾಕ ಶುಕ್ಲ ಪಕ್ಷದ ಏಕಾದಶಿ. ಸಮಸ್ತ ಪದ್ಮಶಾಲಿ ಭಾಂಧವರಿಗೂ ಭೃಗು ಮಹರ್ಷಿ ಜಯಂತಿಯ ಶುಭಾಶಯಗಳು. ಮಹರ್ಷಿಯ  ಕೃಪೆ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಪ್ರಾರ್ಥಿಸೋಣ.

ಬ್ರಹ್ಮಣೋ ಹೃದಯಂ ಭಿತ್ತ್ವಾ ನಿಃಸೃತೋ ಭಗವಾನ್ಭೃಗುಃ|



ಭಗವಾನ್ ಭೃಗುವು ಬ್ರಹ್ಮನ ಹೃದಯದಿಂದ ಬಂದವರು, ಈ ಭೃಗು ಮಹರ್ಷಿಯನ್ನು ಪದ್ಮಶಾಲಿಯರ ಮೂಲ ಪುರುಷ ಎಂದು ಗುರುತಿಸಲಾಗುತ್ತದೆ. ಭೃಗು ಮಹರ್ಷಿಯ ಕುರಿತು ಹಲವಾರು ಪುರಾಣ ಕಥೆಗಳಿವೆ. “ಭೃಗು ಜಾಯತೇ ಇತಿ ಭಾರ್ಗವ”ಎಂದರೆ ಮೂಲ ಪುರುಷ ಭೃಗು ಮಹರ್ಷಿಯ ವಂಶದವರು ಭಾರ್ಗವರು ಎಂದು ಕರೆಯುತ್ತಾರೆ.  ವೈದಿಕ ಧರ್ಮಾಚರಣೆಯಲ್ಲಿ ಭೃಗು ಮಹರ್ಷಿ ಗೆ ಮಹತ್ತರ ಸ್ಥಾನವಿದೆ. ಇವರ ಮುಂದಾಳತ್ವದಲ್ಲಿ ಹಲವಾರು ಯಾಗ ಯಜ್ಞ ಗಳು ನಡೆದಿವೆ.

ಧಕ್ಷ ಪ್ರಜಾಪತಿಯ ಮಗಳಾದ ಖ್ಯಾತಿ ದೇವಿಯೊಂದಿಗೆ ವಿವಾಹ ಜರುಗುತ್ತದೆ. 

ಖ್ಯಾತಿದೇವಿ  ಪತ್ನಿಗೆ ಶ್ರೀ ಲಕ್ಷ್ಮೀದೇವಿ ವರನೀಡಿ ಅದನ್ನು ನೆರವೇರಿಸಲು ಖ್ಯಾತಿದೇವಿಯ ಉದರಲ್ಲಿ ಮಗಳಾಗಿ ಜನಿಸಿದಳು. ಅದರಿಂದ ಭಾರ್ಗವೀ ಎಂದೂ ಹೆಸರಾಯಿತು. 

ಇವರಿಗೆ ಧಾತ, ವಿಧಾತ ಎನ್ನುವವರು ಪುತ್ರರಾಗಿ ಮತ್ತು ಶ್ರೀ ಲಕ್ಷ್ಮೀದೇವಿಯು  ಭಾರ್ಗವಿ ಯಾಗಿ ಜನುಮಿಸುತ್ತಾರೆ.

 ಬ್ರಹ್ಮನು ಸೃಷ್ಟಿಸಿದ ಅನೇಕ ಪ್ರಜಾಪತಿಗಳಲ್ಲಿ ಒಬ್ಬನು, ಭವಿಷ್ಯಸೂಚಕ ಜ್ಯೋತಿಷದ ಮೊದಲ ಸಂಕಲಕ, ಮತ್ತು ತ್ರೇತಾಯುಗದ ಅವಧಿಯಲ್ಲಿ ಬರೆದ ಅತ್ಯುತ್ಕೃಷ್ಟ ಜ್ಯೋತಿಷ ಕೃತಿ ಭೃಗು ಸಂಹಿತಾದ ಲೇಖಕ. ಭೃಗು ಸಂಹಿತೆ ಭಾರತೀಯ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರದ ವಿಕಾಸಕ್ಕೆ ಕಾರಣವಾಗುತ್ತದೆ. 


ಹಿಂದೂ ಪುರಾಣದ ಪ್ರಕಾರ, ಸಾಮಾಜಿಕ ಸ್ತರದಲ್ಲಿ ಮೇಲ್ಜಾತಿಯ ಬ್ರಾಹ್ಮಣರಿಗೆ ನೆರವಾಗಲು ಮತ್ತು ತನ್ನ ಮೇಲಿದ್ದ ಲಕ್ಷ್ಮಿಯ ಶಾಪ ತಗ್ಗಿಸಲು ಭೃಗು ಮಹರ್ಷಿ ಭೃಗು ಸಂಹಿತೆಯನ್ನು ಬರೆದರು. ಇದು ಶುಕ್ರ ಮತ್ತು ಮಹರ್ಷಿ ಭೃಗು ನಡುವೆ ನಡೆದ ಮಾತುಕತೆ ರೂಪದ ಗ್ರಂಥವಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ಧೇ ಆದಲ್ಲಿ, ಮನುಷ್ಯನ ಎಲ್ಲ ಸಂಕಟಗಳಿಗೆ ಪರಿಹಾರ ದೊರೆಯಲಿದೆ. 


ಹಿಂದೂ ಪುರಾಣ ಮತ್ತು ಇತಿಹಾಸಲ್ಲಿ ಬರುವ ಹಲವು ಋಷಿಮುನಿಗಳು, ರಾಜರು ಹಾಗೂ ಮಹಾಪುರುಷರು ಭೃಗು ಸಂಹಿತೆಯನ್ನು ಉಪಯೋಗಿಸಿದ್ದಾರೆ. ತಮ್ಮ ಬದುಕಿನಲ್ಲಿ ಉಂಟಾದ ತೊಳಲಾಟಗಳಿಂದ ಹೊರಬರಲು ಇಲ್ಲವೇ ಬದುಕನ್ನು ಇನ್ನಷ್ಟು ಸಮೃದ್ಧಗೊಳಿಸಲು ಇದನ್ನು ಬಳಸಿಕೊಂಡಿದ್ದಾರೆ. ಇದು ಕೇವಲ ಕೆಲವರಿಗಷ್ಟೇ ಬೇಕಾದ ಜ್ಞಾನವಲ್ಲ ಬದಲು ನಂಬಿಕೆಯಿಂದ ಇದನ್ನು ಓದಿ ಅನುಸರಿಸಿದರೆ ಎಲ್ಲ ರೀತಿಯ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರ ದೊರೆಯುತ್ತದೆ. ಭೋಜಪತ್ರದ ಮೇಲೆ ಬರೆಯಲಾದ ಭೃಗು ಸಂಹಿತೆ ಹಲವು ಪಾತ್ರ ಅಥವಾ ಅಧ್ಯಾಯಗಳಾಗಿ ವಿಂಗಡಣೆಯಾಗಿದೆ. ಹಲವರು ತಮ್ಮ ಬಳಕೆಗೆ ಒಂದೊಂದು ಭಾಗವನ್ನು ಕೊಂಡೊಯ್ದಿದ್ದರು. ಹೀಗೆ ಹರಿದು ಹಂಚಿ ಹೋಗಿದ್ದ ವಿವಿಧ ವಿಭಾಗಗಳನ್ನು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿ ಭೃಗು ಮಹಾಶಾಸ್ತ್ರವನ್ನು ರೂಪಿಸಲಾಗಿದೆ.


ಸಂಗ್ರಹ ಮಾಹಿತಿ.

ಪಿ.ಎಸ್.ರಂಗನಾಥ



Friday, May 21, 2021

ತಿರುಮಲ ಶ್ರೀ ಪದ್ಮಾವತಿ (ಲಕ್ಷ್ಮಿ) ದೇವಿ ಪದ್ಮಶಾಲಿ ಮನೆ ಮಗಳು

 ತಿರುಮಲ ಶ್ರೀ ಪದ್ಮಾವತಿ (ಲಕ್ಷ್ಮಿ) ದೇವಿ   ಪದ್ಮಶಾಲಿ ಮನೆ ಮಗಳು 


ಹದಿನೈದನೆಯ ಶತಮಾನದ ಆರಂಭದಲ್ಲಿ, ತಿರುಪತಿ, ತಿರುಚಾನೂರು, ಯೋಗಿ ಮಲ್ಲವರಂ, ನಾರಾಯಣವರಂ ಮುಂತಾದ ಪ್ರಾಂತ್ಯಗಳಲ್ಲಿ  ಜೀವನೋಪಾಯಕ್ಕಾಗಿ ಕೈಮಗ್ಗ ವೃತ್ತಿಯನ್ನು ಅವಲಂಬಿಸಿದ್ದ ನೇಕಾರರಲ್ಲಿ  ನಮ್ಮ ಪದ್ಮಶಾಲಿ ಸಮಾಜ ಮತ್ತು ಇತರೆ ನೇಕಾರರ ಮಧ್ಯೆ  ಒಂದು ವಿವಾದ ಶುರುವಾಗಿತ್ತು. ಅದೇನೆಂದರೆ, ತಿರುಚಾನೂರು ಪದ್ಮಶಾಲಿಗಳು "ಅಲಮೇಲುಮಂಗಮ್ಮ" ನಮ್ಮ ಮನೆಮಗಳು ಅಂತ ಹೇಳಿದರೆ,  ಇತ್ತ ಇತರೆ ನೇಕಾರರು "ಇಲ್ಲ ಇಲ್ಲ ನಮ್ಮ ಮನೆಮಗಳು" ಎಂದು, ಪದ್ಮಾವತಿ ದೇವಿಗೆ ತಾವೇ ಮೊದಲಿಗೆ ಅರಿಶಿಣ ಕುಂಕುಮ ಮತ್ತು ಸೀರೆಯನ್ನು ಕೊಡಬೇಕು ಎಂದು ಇಬ್ಬರೂ ವಾದಿಸುತಿದ್ದರು.


ಈ ಸಮಸ್ಯೆ ಯನ್ನ ಆಗಿನ ಚಂದ್ರಗಿರಿಯ ಪ್ರಾಂತ್ಯವನ್ನ ಆಳುತಿದ್ದ ಪುರುಷೋತ್ತಮ ರಾಯರನ್ನ ಕೇಳಿಕೊಂಡರಂತೆ. ಇಂತಹ ಜಟಿಲವಾದ ಸಮಸ್ಯೆಯನ್ನು ಬಗೆಹರಿಸಲು ಎಷ್ಟೇ ಆಲೋಚಿಸಿದರು ಯಾವುದೇ ಪರಿಹಾರ ಸಿಗಲಿಲ್ಲ. ಕೂಡಲೇ ಜಗತ್ಪ್ರಸಿದ್ದ ಮಹಾನ್ ದಾರ್ಶನಿಕ ತಾಳ್ಳಪಾಕ್ಕ ಅನ್ನಮಯ್ಯರವರ ಮೊಮ್ಮಗರಾದ  ಚಿನ್ನನ್ನ ಆಚಾರ್ಯರನ್ನ ಕೇಳಿದರಂತೆ.  ಚಿನ್ನನ್ನಾಚಾರ್ಯ ರವರ ಇನ್ನೊಂದು ಹೆಸರು  ತಾಳ್ಳಪಾಕ ಚಿನತಿರು ವೆಂಗಳನಾಥ.  


ಅನ್ನಮಯ್ಯರಿಗೆ ಬಾಲ್ಯದಲ್ಲಿ  ಅಲಮೇಲು ಮಂಗಮ್ಮ ಪ್ರಸಾದ ತಿನ್ನಿಸಿದಂತೆ,   ವೆಂಗಳನಾಥರಿಗೆ ಸ್ತನಪಾನವನ್ನು ಮಾಡಿಸಿದ್ದರಂತೆ. ಆದ್ದರಿಂದ ಚಿನ್ನನ್ನರಿಗೆ ಕವಿತೆ ಬರೆಯುವ ಕಲೆ ಸಿದ್ದಿಸಿತಂತೆ. ಅದೂ ಅಲ್ಲದೆ ಚಿನ್ನನ್ನರೊಂದಿಗೆ ಯಾವಾಗಂದರೆ ಅವಾಗ ಅಲಮೇಲು ಮಂಗಮ್ಮ ಮಾತನಾಡುತಿದ್ದರಂತೆ.


ಆದ್ದರಿಂದ ಚಿನ್ನನ್ನ ಇಬ್ಬರನ್ನ ಸಮಧಾನಗೊಳಿಸಿ, ದೇವಿ ಅಲಮೇಲು ಮಂಗಮ್ಮರ ಜತೆ ಮಾತನಾಡುತ್ತ, "ತಾಯಿ ಸಮಸ್ಯೆ ಏನಂತ ನಿನಗೆ ತಿಳಿದಿದೆ, ನೀನು ಯಾರ ಮಗಳು ಹೇಳು  ಎಂದು ಕೇಳುತ್ತಾನೆ"


ಆಗ ದೇವಿ ಪ್ರತ್ಯಕ್ಷಳಾಗಿ, " ನಾನು ಪದ್ಮಶಾಲಿಗಳ ಮನೆಮಗಳು, ತವರು ಮನೆಯವರಾದ ಪದ್ಮಶಾಲಿಯವರು ನನಗೆ ಮೊದಲು ಅರಿಶಿಣ ಕುಂಕುಮ ಮತ್ತು ಸೀರೆಯನ್ನು ಕೊಡಬೇಕು ಅದರ ನಂತರ ಬೇರೆಯವರ ಗೌರವಾದಾರಗಳನ್ನ ಸ್ವೀಕರಿಸುತ್ತೇನೆ" ಎಂದು ಹೇಳುತ್ತಾಳೆ.


ಅಲಮೇಲು ಮಂಗಮ್ಮ ಹೇಳಿದ ಈ ಸಾಕ್ಷಿಯಿಂದ ಸಮಸ್ಯೆ ಅಲ್ಲಿಗೆ ಮುಗಿಯಿತು.  ಕೂಡಲೇ, ಪುರುಷೋತ್ತಮ ರಾಯರು ಅಲ್ಲಿ ದಾಖಲೆ ಬರೆಯಿಸಿ ಆ ಸಮಸ್ಯೆಗೆ ಸುಂಖಾಂತ್ಯವನ್ನಾಡಿದರು. ಶುಭಕೃತ್ತು ನಾಮಸಂವತ್ಸರ, ಕಾರ್ತಿಕ ಹುಣ್ಣಿಮೆ  ಗುರುವಾರ 23 ಅಕ್ಟೋಬರ್ 1541 ರಂದು ಈ ಘಟನೆ ನಡೆದಿತ್ತು ಎಂದು ಇತ್ತೀಚೆಗೆ ದೊರೆತ ಶಾಸನವೊಂದರಲ್ಲಿ ಈ ಕುರಿತು ದಾಖಲಾಗಿದೆ.


ಈ ಎಲ್ಲ ಕಾರಣದಿಂದ,  ತಿರುಪತಿ, ಶ್ರೀರಂಗಂ, ಅಹೋಬಿಲಂ, ತಿರುಚಾನೂರ್, ನಾರಾಯಣವನಂ, ಶ್ರೀನಿವಾಸ ಮಂಗಾಪುರಂ, ಜಮ್ಮಲಮಡುಗು ಮಂಗಳಗಿರಿ ಮುಂತಾದ 108  ವೈಷ್ಣವ ಕ್ಷೇತ್ರಗಳಲ್ಲಿ ಪದ್ಮಶಾಲಿಗಳೇ ವಸ್ತ್ರಾಭರಣವನ್ನು, ಅರಿಶಿಣ ಕುಂಕುಮ ಕೊಡುತ್ತಾ ಬಂದಿದ್ದಾರೆ.


ತಿರುಪತಿ ದೇವಸ್ಥಾನದವರು ಸಿರಿ ಕೋಲುವು ಎನ್ನುವ ಪುಸ್ತಕ ಪ್ರಕಟಿಸಿದ್ದಾರೆ. ಅದರಲ್ಲಿ ಈ ಬಗ್ಗೆ ಶ್ರೀ ಮಹಾಲಕ್ಷ್ಮಿ ಮತ್ತು ಪದ್ಮಾವತಿ ದೇವಿ ಪದ್ಮಶಾಲಿಯವರ ಮನೆಮಗಳು ಎಂದು ಬರೆಸಿದ್ದಾರೆ. 


ಪದ್ಮಾವತಿ ತಾಯಿಗೆ ದೇವಾಲಯ ನಿರ್ಮಾಣ ಮಾಡಲು, ಆ ಕಾಲದಲ್ಲಿ ತಾಳ್ಳಪಾಕ ಚಿನ್ನನ್ನರವರಿಗೆ ಪದ್ಮಶಾಲಿ ಸಮಾಜದವರು ಇಪ್ಪತ್ತು ಸಾವಿರ ವರಹಗಳನ್ನು ನೀಡಿದ್ದರಂತೆ.

ಬರಹ: ಪಿ.ಎಸ್.ರಂಗನಾಥ

ಸಂಗ್ರಹ ಮಾಹಿತಿ







ಪದ್ಮಶಾಲಿ ವಂಶ ಚರಿತ್ರೆ - ತೆಲುಗು

 


ಭಕ್ತ ಮಾರ್ಕಂಡೇಯ

 


Thursday, May 20, 2021

ಭಾವನ ಋಷಿ - ಭೃಗು ವಂಶೋದ್ದಾರಕ



ಭಾವನ ಋಷಿ - ಭೃಗು ವಂಶೋದ್ದಾರಕ, ಮಾರ್ಕಂಡೇಯ ಪುತ್ರ, ಶ್ರೀ ಮನ್ ನಾರಾಯಣ ಅಂಶ ಉಳ್ಳ ಭಾವನಾರಾಯಾಣ ಎಂದು ಕರೆಯಲ್ಪಡುವ, ಶ್ರೀ ವೇದಶಿರ/ ಶ್ರೀ ಭಾವ ನಾರಾಯಣ ಸ್ವಾಮಿ/ ಶ್ರೀ ಭಾವಾನಾ ಋಷಿ ಹಲವಾರು ಹೆಸರುಗಳಲ್ಲಿ ಇವರನ್ನ ಗುರುತಿಸಲಾಗುತ್ತದೆ.

- ಪಿ.ಎಸ್.ರಂಗನಾಥ. ರಾಂಪುರ.

ಶ್ರೀಮನ್ನಾರಾಯಣನ ಅಂಶವುಳ್ಳ ಭೃಗು ಕುಲದ ಉದ್ದಾರಕ ಭೃಗು ಮಹರ್ಷಿಯ ಮರಿ ಮೊಮ್ಮಗ. ಶ್ರೀ ಮಾರ್ಕಂಡೇಯ ಅವರ ಪುತ್ರ, ಪ್ರಪ್ರಥಮ ವಸ್ತ್ರ ಸೃಷ್ಟಿ ಕರ್ತ ಬ್ರಹ್ಮ ಲೋಕ ಶಿವನ ಕೈಲಾಸ ವಿಷ್ಣುವಿನ ವೈಕುಂಠಕ್ಕೆ ಮತ್ತು  ಸೌರಮಂಡಲದ ಜಗತ್ತಿಗೆ ಸಶರೀರದೊಂದಿಗೆ  ಹೋಗಬಲ್ಲ ಮಹಾ ತಪೋ ಸಂಪನ್ನನಾದ  ಭಾವನಾ ಮಹರ್ಷಿ ಜಯಂತಿ ಮಹೋತ್ಸವದ ಪರ್ವದಿನ ಇಂದು.

ಸಕಲ ದೇವರುಗಳಿಗೆ ಮತ್ತು ಸಕಲ ಮಾನವರಿಗೆ ನಗ್ನತ್ವದಿಂದ  ವಿಮುಕ್ತಿಗೊಳಿಸಲು ಶ್ರೀ ಮಹಾವಿಷ್ಣುವಿನ ನಾಭಿಕಮಲದಿಂದ ತಂತುಗಳನ್ನ ಪಡೆದು ವೇದ ಜ್ನಾನದಿಂದ (ಮಗ್ಗ) ಯಂತ್ರವನ್ನು ನಿರ್ಮಿಸಿ ವಸ್ತ್ರ ನಿರ್ಮಾಣಕ್ಕಾಗಿ ಮಣಿಪುರ ಎನ್ನುವ ಪ್ರತ್ಯೇಕ ಗೃಹ ನಿರ್ಮಿಸಿ, ಚೈತ್ರ ಶುದ್ಧ ಪಂಚಮಿ ದಿನದಂದು, ಮೊಟ್ಟ ಮೊದಲ ಬಾರಿಗೆ ಅತ್ಯುತ್ತಮ ದರ್ಜೆಯ ಉಡುಪುಗಳನ್ನು ತಯಾರಿಸಿ  ಮೊದಲು ವಿಘ್ನೇಶ್ವರನಿಗೆ ಸಲ್ಲಿಸಲಾಯಿತು


ವಿಘ್ನ ನಿವಾರಕನ ಆಶೀರ್ವಾದ ಪಡೆದ ನಂತರ ಶ್ರೀ ಲಕ್ಷ್ಮಿ ನಾರಾಯಣರಿಗೆ ವಸ್ತ್ರಗಳನ್ನು ಸಮರ್ಪಿಸಿದರು. ಅವರು ಸಂತೋಷಗೊಂಡು ಸಕಲ ಸಂಪತ್ತನ್ನೆಲ್ಲಾ ದಯಪಾಲಿಸಿ ಪದ್ಮಬ್ರಹ್ಮ, ಪದ್ಮಶಾಲಿ,  ಬಹೋತ್ತಮ, ಪದ್ಮಶಾಖಿ ಎನ್ನುವ ಬಿರುದುಗಳನ್ನ ನೀಡಿದರು.


ಚತುರ್ಮುಖ ಬ್ರಹ್ಮ ಮತ್ತು ಸರಸ್ವತಿಯವರಿಗೆ ವಸ್ತ್ರಗಳನ್ನು ಅರ್ಪಿಸಿದರೆ,  ಅವರು 64 ವಿದ್ಯೆಗಳನ್ನು, ಅಖಂಡ ಬ್ರಹ್ಮಜ್ನಾನವನ್ನು ಕೊಡುಗೆಯಾಗಿ ನೀಡಿದರು.


ನಂತರ ಶಿವ ಪಾರ್ವತಿಯವರಿಗೆ ವಸ್ತ್ರಗಳನ್ನ ಸಮರ್ಪಿಸಲಾಯಿತು, ಪಾರ್ವತೀ ದೇವಿ ಮೃತಾ ಸಂಜೀವನಿ ವಿದ್ಯಾ, ಶಾಂಭವಿ ವಿದ್ಯೆ ಗಳನ್ನು ಅನುಗ್ರಹಿಸಿದರು. 


ಪರಮಶಿವನು ವಸ್ತ್ರದ ಬದಲಾಗಿ, ಹುಲಿ ಚರ್ಮವನ್ನು ಕೇಳಿದನು, ಸೂರ್ಯಪುತ್ರಿ  ಭದ್ರಾವತಿ ದೇವಿಯೊಂದಿಗೆ ಹುಲಿ ಚರ್ಮವನ್ನು ತಂದು ಪರಮೇಶ್ವರನಿಗೆ ಹುಲಿ ಚರ್ಮದ ವಸ್ತ್ರವನ್ನು  ಮಾಡಿಕೊಟ್ಟರು.


ಅದೇರೀತಿ, ಸಕಲ ದೇವರಿಗೂ ವಸ್ತ್ರಗಳನ್ನ ಸಮರ್ಪಿಸಿದರು. ಅವರೆಲ್ಲರೂ, ಮೂವತ್ತಾರು ಬಿರುದುಗಳನ್ನ ಕೊಟ್ಟು ಗೌರವಿಸಿದರು.


ಮಹಾವಿಷ್ಣು ವು "ವೇದಶೀರ/ಭಾವನಾ ಋಷಿಗೆ" ನೂರು ಪದ್ಮಗಳನ್ನು ನೀಡಿ ಅವುಗಳ ಪ್ರಸಾದದೊಂದಿಗೆ  ನೂರು ಜನ ಋಷಿಮುನಿಗಳ ಸಂತಾನವನ್ನು ನೀವು ಹೊಂದಿರಿ ಎಂದು ಅನುಗ್ರಹಿಸಿದರು.


ಅಜರಾಶ್ಚಟಾಯೋ ಪುತ್ರ

ಪೌತ್ರಾಶ್ಚ  ಬಹುವೋ ಭವನ್!

ಮಾರ್ಕಂಡೇಯ ಸಮಾಖ್ಯಾತಃ

ಋಷಯೋ ರಿಷಾಯೋ ವೇದ ಪಾರಂಗತ !!


ಭಾವನಾರಾಯಣನ ಸಂತಾನವು ಮಾರ್ಕಂಡೇಯ ನಂತೆ ಅಖಂಡ ಮೇಧಾವಿಗಳಾಗಿ ಋಷಿಗಳು, ವೈದಿಕ ವಿದ್ವಾಂಸರು, ಭೃಗು ಬ್ರಾಹ್ಮಣ ಪದ್ಮಶಾಲಿ ವಂಶದ ಮೂಲ ಪುರುಷರಾದರು.


ಶ್ರೀ ಭಾವನಾರಾಯಣ ಧರ್ಮಪತ್ನಿ ಸೂರ್ಯ ಪುತ್ರಿ ಭದ್ರಾವತಿ ದೇವಿ ಸಮೇತ  ಕಾಲವಾಸುರ ನೊಂದಿಗೆ ಅತ್ಯಂತ ಭಯಾನಕ ಯುದ್ಧದಲ್ಲಿ "ಶ್ರೀ ಮನ್ ನಾರಾಯಣ ಅಸ್ತ್ರವನ್ನು"  ಉಪಯೋಗಿಸಿ ಕಾಲವಾಸುರನನ್ನ ಸಂಹರಿಸಿದರು.


ಭಗವಾನ್ ವಿಷ್ಣುವು ಪ್ರತ್ಯಕ್ಷರಾಗಿ,


ಯುವಾಂತು ಪದ್ಮಕೋಶಿಯೈಃ

ಪೂಜ್ಯ ದ್ವಿಜಾದಿಭಿ

ಯೌವೈನಾ ಪೂಜ್ಯತೆ ತೌತು

ಮಮ ದ್ರೋಹಿ ಭವೇಧೃವಂ


ಓ ಭಾವನಾರಾಯಣ!

ನಾನು ನಿಮಗೆ ವಚನ ನೀಡುತಿದ್ದೇನೆ. ಭೃಗು ವಂಶದಲ್ಲಿ ಜನಿಸಿದವರೆಲ್ಲರೂ ಅವರು ನನ್ನ ವಂಶದವರೇ ಆಗಿರುತ್ತಾರೆ. ನನ್ನ ಧರ್ಮವೇ ಅವರ ಧರ್ಮವು. ನನ್ನನ್ನು ಪೂಜಿಸುವವರು, ನಿನ್ನನ್ನೂ ಸಹ ಆರಾಧಿಸುತ್ತಾರೆ.