Sunday, November 20, 2022

"ಪದ್ಮಶಾಲಿಗಳ ಹಿನ್ನೆಲೆಯ ತೆಲುಗು ಚಲನಚಿತ್ರ ಮಲ್ಲೀಶ್ವರಿ"


 

1951 ನೇ ಇಸವಿಯಲ್ಲಿ ಬಿಡುಗಡೆಯಾದ ತೆಲುಗು ಚಲನ ಚಿತ್ರ ಮಲ್ಲೀಶ್ವರಿ ಅಂದಿನ ದಿನಗಳಲ್ಲಿ ಒಂದು ಅದ್ಭುತ ದೃಶ್ಯಕಾವ್ಯ ಎಂದು ಹೇಳಲಾಗುತ್ತದೆ. ಈ ಚಿತ್ರ ಬಿಡುಗಡೆಯಾಗಿ 70 ವರ್ಷಗಳು ಕಳೆದರೂ ಜನರ ಮನಸ್ಸಿನಿಂದ ದೂರವಾಗಿಲ್ಲ. ಚಿತ್ರರಂಗದ ಸಾಹಿತ್ಯ ಎಂದರೆ ಎಲ್ಲರಿಗೂ ಮೊದಲು ನೆನಪಾಗುವ ಚಿತ್ರ ಮಲ್ಲೀಶ್ವರಿ.  ಪ್ರಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಾದ ಬಿ.ಎನ್.ರೆಡ್ಡಿಯವರು ಈ ಚಿತ್ರವನ್ನ ನಿರ್ಮಿಸಿದ್ದರು. ಈ ಚಿತ್ರದ ವಿಶೇಷ ಏನೆಂದರೆ ನಮ್ಮ ಪದ್ಮಶಾಲಿಗಳಿಗೆ ಸಂಭಂಧ ಇರುವಂತಹ ಚಿತ್ರ. ಇದರಲ್ಲಿನ ಕಥಾನಾಯಕ ದಿ. ಎನ್.ಟಿ.ರಾಮರಾವ್ ಅವರು ಒಂದು ಸಂಧರ್ಭದಲ್ಲಿ ನಾವು ಪದ್ಮಶಾಲಿಗಳು ನಮ್ಮ ಮಾವ ನೂರು ಮಗ್ಗಗಳನ್ನ ಇಟ್ಟುಕೊಂಡಿದ್ದಾರೆ ಎಂದು ಹೇಳುತ್ತಾರೆ. ಕುಲದ ಕುರಿತು ನೇರವಾಗಿ ಹೇಳುವ ಚಿತ್ರದಲ್ಲಿನ ಸಂಭಾಷಣೆ ಇದೇ ಮೊದಲಾಗಿರಬಹುದೇನೋಪದ್ಮಶಾಲಿಗಳ ಹಿನ್ನೆಲೆಯನ್ನಿಟ್ಟುಕೊಂಡು ನಿರ್ಮಿಸಿದ ಮೊದಲ ಚಿತ್ರ ಇದು. ವೃತ್ತಿಯಲ್ಲಿ ಕಲಾನೈಪುಣ್ಯತೆಯನ್ನಿಟ್ಟುಕೊಂಡು ಬದುಕುತಿದ್ದ ಪದ್ಮಶಾಲಿಗಳು ಬಹಳಷ್ಟು ಜನರ ಹೃದಯಗೆದ್ದಿದ್ದರು ಎನ್ನುವುದು ಪದೇ ಪದೇ ಸಾಬೀತಾಗುತ್ತದೆ.  ರಾಜ ಮಹಾರಾಜರ ಕಾಲದಿಂದಲೂ ಪದ್ಮಶಾಲಿಗಳಿಗೆ ಒಂದು ಉನ್ನತವಾದ ಸ್ಥಾನವನ್ನ ನೀಡಲಾಗಿರುವುದನ್ನ ನಾವು ಗಮನಿಸಿದ್ದೇವೆ. ಅಂತಹ ವಿಷಯವನ್ನೂ ಸಹ ಈ ಸಿನಿಮಾದಲ್ಲೂ ತೋರಿಸಲಾಗಿದೆ.

 

ಚಿತ್ರದ ಕಥೆ ಏನೆಂದರೆ, ಶ್ರೀಕೃಷ್ಣದೇವರಾಯ ರಾಜ್ಯಭಾರ ಮಾಡುವ ಸಮಯದಲ್ಲಿ ಆತನ ಪರಿಧಿಯಲ್ಲಿ ವೀರಾಪುರಂ ಎನ್ನುವ ಗ್ರಾಮವಿರುತ್ತದೆ. ಆ ಊರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಕಾರರಾದ ಪದ್ಮಶಾಲಿಗಳು ವಾಸಿಸುತ್ತಿರುತ್ತಾರೆ. ಆ ಹಳ್ಳಿಯ ಜನ ಬಟ್ಟೆ ನೇಯುವುದರಲ್ಲಿ, ಶಿಲ್ಪಗಳನ್ನು ಮಾಡುವುದರಲ್ಲಿ, ಆಟ ಆಡುವುದರಲ್ಲಿ ನಿಪುಣರು. ನಾಯಕ ನಾಗರಾಜು ಮತ್ತು ನಾಯಕಿ ಮಲ್ಲೀಶ್ವರಿ ಯವರ ಎರಡು ಕುಟುಂಬಗಳು. ಮಲ್ಲೀಶ್ವರಿ, ನಾಗರಾಜು ಅವರ ತಾಯಿಯ ಸ್ವಂತ ಅಣ್ಣನ ಮಗಳು. ಬಾಲ್ಯದಿಂದಲೂ  ಅನ್ಯೋನ್ಯತೆಯಿಂದ ನಾಗರಾಜು ಮತ್ತು ಮಲ್ಲೀಶ್ವರಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಒಬ್ಬರನ್ನ ಬಿಟ್ಟು ಇನ್ನೊಬ್ಬರಿರಲಾರದ ಸ್ಥಿತಿ ಅವರದು. ಆದರೆ ಮಲ್ಲೀಶ್ವರಿ ತಾಯಿಗೆ ನಾಗರಾಜನಂಥ ಬಡವ ತನ್ನ ಮಗಳಿಗೆ ಸೂಕ್ತವಲ್ಲ ಎನ್ನುವ ಮನೋಧೋರಣೆ ಅವರದು. ತನ್ನ ಮಗಳಿಗೆ ರಾಣಿಯ ಅಂತಃ ಪುರದಲ್ಲಿ ವಾಸಿಸುವ ಯೋಗವಿದೆ ಎಂದು ಭಾವಿಸಿರುತ್ತಾಳೆ. ರಾಣಿವಾಸ ಎಂದರೆ ರಾಣಿಯರ ಅರಮನೆಯಲ್ಲಿ ವಾಸ ಮಾಡುವ ಪದ್ದತಿ. ರಾಣಿಯರು ಮತ್ತು ಪರಿವಾರದವರ ಮನರಂಜನೆಗಾಗಿ ಕಲೆ, ಸಾಹಿತ್ಯ, ನೃತ್ಯ ಮುಂತಾದ ಪ್ರಾಕಾರಗಳಲ್ಲಿ ನುರಿತವರನ್ನ  ಮತ್ತು ಸುಂದರ ಮಹಿಳೆಯರನ್ನು ತಮ್ಮ ನಿವಾಸಕ್ಕೆ ಕರೆದು ಅವರನ್ನ ಅಂತಃಪುರ ನಿವಾಸಿಯನ್ನಾಗಿ ಇಟ್ಟುಕೊಳ್ಳುತಿದ್ದುದು ವಾಡಿಕೆ ಯಾಗಿತ್ತು. ಹುಡುಗಿಯರು ರಾಣಿಯ ನಿವಾಸವನ್ನು ಪ್ರವೇಶಿಸಿದ ನಂತರ ಅವರಿಗೆ ಹೊರಗಿನ ಪ್ರಪಂಚವು ತಿಳಿಯುವುದಿಲ್ಲ. ವಿಶೇಷವಾಗಿ ಗಂಡಸರ ವಾಸನೆ ಸಹ ಸುಳಿಯಬಾರದು. ಇದು ಆ ಕಾಲದ ಪದ್ಧತಿಯಾಗಿತ್ತು. ಈ ಪದ್ಧತಿ ಎಷ್ಟೇ ಅನಿಷ್ಟವಾದರೂ ಹಣದ ಆಸೆ ಇರುವವರು ತಮ್ಮ ಮಕ್ಕಳಿಗೆ ರಾಣಿ ಸ್ಥಾನಮಾನ ಸಿಗಲಿ ಎಂದು ಹಾರೈಸುತ್ತಾರೆ. ತಮ್ಮ ಹೆಣ್ಣುಮಕ್ಕಳು ರಾಣಿಯರ ಅಂತಃಪುರದಲ್ಲಿ ರಾಣಿಯರ ಜತೆ ಬದುಕುತಿದ್ದರೆ, ಆ ಕುಟುಂಬದವರಿಗೂ ಹಾಗೂ ಆ ಮಹಿಳೆಯರಿಗೂ ವಿಶೇಷವಾದ ಗೌರವ, ಆತಿಥ್ಯ ಸತ್ಕಾರ ದೊರೆಯುತಿತ್ತು. ಮಲ್ಲೀಶ್ವರಿಯ ಅಮ್ಮನೂ ಸಹ ಅದನ್ನೇ ನಿರೀಕ್ಷಿಸಿದ್ದಳು. ಹೀಗಾಗಿ ಸಮಾಜದಲ್ಲಿ ಒಳ್ಳೆಯ ಗೌರವ ಎಂದು ಭಾವಿಸಿದ್ದಳು.

 

ನಾಗರಾಜು ಮತ್ತು ಮಲ್ಲೀಶ್ವರಿ ದೊಡ್ಡವರಾದ ಮೇಲೂ ಪರಸ್ಪರ ತುಂಬಾ ಆತ್ಮೀಯರಾಗಿದ್ದರು. ಆ ಆತ್ಮೀಯತೆ ಪ್ರೀತಿಗೆ ತಿರುಗಿತ್ತು. ಮದುವೆಯಾಗುವ ಆಸೆಯೂ ಮನದಲ್ಲಿ ಮೂಡಿತ್ತು. ಒಮ್ಮೆ ಇಬ್ಬರೂ ಕೂಡಿ ಎತ್ತಿನ ಗಾಡಿಯಲ್ಲಿ ಜಾತ್ರೆಗೆ ಹೋಗುತ್ತಾರೆ. ಜಾತ್ರೆಯಲ್ಲಿ ಆಟವಾಡುತ್ತಾರೆ, ವಸ್ತುಗಳನ್ನ ಖರೀದಿಸುತ್ತಾರೆ, ಜ್ಯೋತಿಷ್ಯ ಸಹ ಕೇಳುತ್ತಾರೆ, ಮಲ್ಲೀಶ್ವರಿಗೆ ಅರಮನೆಯಲ್ಲಿ ಬಾಳುವಂತಹ ಯೋಗವಿದೆ ಎಂದು ಹೇಳುತ್ತಾರೆ. ಅದನ್ನೇ ತಮಾಷೆಯಾಗಿ NTR ತೆಗೆದುಕೊಳ್ಳುತ್ತಾರೆ.  ಮರಳಿ ಮನೆಗೆ ಬರುವಾಗ ದಾರಿಯಲ್ಲಿ ಅತ್ಯಂತ ಜೋರಾಗಿ ಮಳೆ ಬರುತ್ತಿರುತ್ತದೆ. ಮಳೆನಿಂತ ಮೇಲೆ ಮನೆಗೆ ಹೋಗೋಣವೆಂದು ಅಲ್ಲಿ ಪಾಳುಬಿದ್ದ ಮಂಟಪದಲ್ಲಿ ಆಶ್ರಯಿಸಿರುತ್ತಾರೆ. ಅಕಸ್ಮಾತ್ ಆಗಿ ಅಲ್ಲಿಗೆ ಮಾರುವೇಷದಲ್ಲಿದ್ದಲ್ಲಿ ಶ್ರೀಕೃಷ್ಣದೇವರಾಯರು ಮತ್ತು ಕವಿ ಅಲ್ಲಸಾನಿ ಪೆದ್ದನ್ನ ಅವರು ಸಹ ಮಳೆಯ ಅಬ್ಬರ ನಿಂತ ಮೇಲೇ ಹೋಗೋಣ ಎಂದು ಮಂಟಪದ ಮತ್ತೊಂದು ಬದಿಯಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆಗ ನಾಗರಾಜು ಮತ್ತು ಮಲ್ಲೀಶ್ವರಿ ಸರಸವಾಡುತ್ತಿರುತ್ತಾರೆ. ಮಲ್ಲೀಶ್ವರಿ ಖುಷಿಯಿಂದ ನಾಟ್ಯವಾಡುತ್ತಿರುತ್ತಾಳೆ. ತಲ್ಲೀನತೆಯಿಂದ ನೋಡಿದ ವೇಷಧಾರಿ ರಾಯರು ಮತ್ತು ಕವಿ ಪೆದ್ದನ್ನ ಹರ್ಷಗೊಂಡು ಅವರ ವಿವರ ಕೇಳಿ ತಿಳಿದುಕೊಳ್ಳುತ್ತಾರೆ. ಶಾಸ್ತ್ರೀಯವಾಗಿ ನೃತ್ಯ ಕಲಿತಿದ್ದೀರಾ? ಯಾರು ನಿಮ್ಮ ಗುರು ಎಂದು ಮಾತಿಗೆಳೆಯುತ್ತಾರೆ. ಅಯ್ಯೋ ಅಂತಹದ್ದೇನಿಲ್ಲ. ಮನಸ್ಸಿಗೆ ಬಂದ ಹಾಗೆ ನೃತ್ಯ ಮಾಡುತ್ತೇನೆ. ಅಷ್ಟೇ ಎಂದು ನಾಚಿಕೆಯಿಂದ ಹೇಳುತ್ತಾಳೆ. ಹೀಗೆ ಸಂಭಾಷಿಸುತ್ತಿರುವಾಗ, ಜಾತ್ರೆಯಿಂದ ಖರೀದಿಸಿ ತಂದಿದ್ದ ಹಣ್ಣುಗಳನ್ನ ರಾಯರ ಜತೆ ಹಂಚಿಕೊಳ್ಳುತ್ತಾಳೆ. ನಾಗರಾಜು ಸಹ ಅವರು ಯಾರು, ಯಾವ ಊರು ಎಂದು ಕೇಳಿದ್ದಕ್ಕೆ, ನಾವು ವಿಜಯನಗರದವರು ಎಂದು ಕವಿ ಅಲ್ಲಸಾನಿ ಪೆದ್ದನ್ನ ಹೇಳುತ್ತಾನೆ.  ಓಹ್, ಹಾಗಾದರೆ ‘ ನಿಮಗೆ ರಾಜರ ಅರಮನೆಯ ಸಂಭಂಧವಿರಬಹುದು, ಹೇಗಾದರು ಮಾಡಿ ಅರಮನೆಯವರನ್ನ ಸಂಪರ್ಕಿಸಿ ನಮ್ಮ ಮಲ್ಲೀಶ್ವರಿಗೆ ರಾಣಿವಾಸಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿ, ಏಕೆಂದರೆ ಅವಳಿಗೆ ಅರಮನೆಯಲ್ಲಿ ಬಾಳಿ ಬದುಕುವ ಯೋಗವಿದೆಯಂತೆ ಎಂದು ತಮಾಷೆ ಮಾಡುತ್ತಾನೆ. ಮಲ್ಲೀಶ್ವರಿ ತನ್ನ ಸೋದರ ಮಾವನನ್ನು ಚುಡಾಯಿಸಿತ್ತಾಳೆ. ಅವರ ಈ ವಿನೋದದ ಮೋಜಿಗೆ ನಗುತ್ತ ರಾಯರು ಅಲ್ಲಿಂದ ಹೊರಡುತ್ತಾರೆ, ಆಗಲೂ ಸಹ ನಾಗರಾಜ ಮತ್ತೊಮ್ಮೆ ರಾಯರತ್ತ ತಿರುಗಿ, ಮಲ್ಲೀಶ್ವರಿಗೆ ರಾಣಿವಾಸಕ್ಕೆ  ಕಳುಹಿಸಲು ಮರೆಯಬೇಡಿ ಪದೇ ಪದೇ ಹೇಳುತ್ತಾನೆ. ಸರಿ ಎಂದು ರಾಯರು ನಗುತ್ತಾ ಹೊರಟು ಹೋಗುತ್ತಾರೆ. ರಾಯರು ಅರಮನೆಗೆ ಬಂದು ನಡೆದ ಘಟನೆಯನ್ನ ರಾಣಿ ತಿರುಮಲದೇವಿಯವರ ಬಳಿ ಹೇಳುತ್ತಾರೆ. ಸಾಧ್ಯವಾದರೆ, ರಾಣಿವಾಸಕ್ಕೆ ವ್ಯವಸ್ಥೆ ಮಾಡಿ ಎಂದು ವಿಷಯ ತಿಳಿಸುತ್ತಾರೆ.

 

ಏನೂ ಇಲ್ಲದ ಭಿಕಾರಿ ನಾಗರಾಜ್ ಜೊತೆ ಸುತ್ತಾಡುತ್ತಾಳೆ ಎಂದು ಮಲ್ಲೀಶ್ವರಿ ತಾಯಿ ಕೋಪಗೊಂಡಿರುತ್ತಾರೆ. ಬಡವ ನಾಗರಾಜು, ತಮ್ಮ ಮಗಳನ್ನು ಹೇಗೆ ಸಂತೋಷಪಡಿಸಲು ಸಾಧ್ಯ ಎಂದು ಹಲಬುತ್ತಾಳೆ. ಇದನ್ನ ನಾಗರಾಜುತಾಯಿಯ ಬಳಿ ಹೇಳಿ ಜಗಳ ಮಾಡುತ್ತಾಳೆ. ಇದರಿಂದ ಕೋಪಗೊಂಡ ನಾಗರಾಜು ತನಗೆ ಗೊತ್ತಿರುವ ಶಿಲ್ಪಕಲೆಯ ವಿದ್ಯೆಯಿಂದ ಹಣ ಸಂಪಾದಿಸಿಕೊಂಡು ಬರುತ್ತೀನಿ ಎಂದು ಹೊರಟುಹೋಗುತ್ತಾನೆ. ನಾಗರಾಜು ಎತ್ತ ಹೋಗುತಿದ್ದಾನೆ ಎಂದು ತಿಳಿಯದ ಮಲ್ಲೀಶ್ವರಿ ಚಿಂತಾಕ್ರಾಂತಳಾಗುತ್ತಾಳೆ. ಇಂದಲ್ಲ ನಾಳೆ ಬರುತ್ತಾನೆ ಎಂದು ಕಾಯುತ್ತಿರುತ್ತಾಳೆ. ಆದರೆ ನಾಗರಾಜು ಬರುವುದಿಲ್ಲ.

 

ಅವಳ ಮನಸ್ಸಿನ ವೇದನೆ ದಿನೇ ದಿನೇ ಹೆಚ್ಚಾಗುತ್ತದೆ. ಈ ಮಧ್ಯೆ ಮಲ್ಲೀಶ್ವರಿಯನ್ನ ರಾಣಿಯ ನಿವಾಸಕ್ಕೆ ಕರೆದು ಕೊಂಡು ಬನ್ನಿ ಅಂತ ರಾಜರ ಆಜ್ನೆ ಬರುತ್ತದೆ. ಇದಕ್ಕೆ ಕಾಯುತಿದ್ದ ತಾಯಿ ಬಹಳ ಖುಷಿಪಡುತ್ತಾಳೆ. ಆದರೆ ನಾಗರಾಜ್ ನನ್ನ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದ ಮಲ್ಲೀಶ್ವರಿ ಕೊರಗುತ್ತಿರುತ್ತಾಳೆ. ರಾಜರ ಆದೇಶವನ್ನ ನಿರ್ಲಕ್ಷಿಸುವಂತಿಲ್ಲ. ರಾಣಿವಾಸಕ್ಕೆ ಹೋಗಲೇ ಬೇಕಾಗುತ್ತದೆ. ಇತ್ತ ನಾಗರಾಜು ತನ್ನ ಶಿಲ್ಪಕಲೆಯಿಂದ ಚೆನ್ನಾಗಿ ಹಣ ಸಂಪಾದಿಸತೊಡಗಿರುತ್ತಾನೆ. ಅವಳು ಹೋದ ಕೆಲವು ದಿನಗಳ ನಂತರ ನಾಗರಾಜು ಕೈತುಂಬಾ ಹಣದೊಂದಿಗೆ ಊರಿಗೆ ಬರುತ್ತಾನೆ. ಆಗ ಮಲ್ಲೀಶ್ವರಿ ರಾಣಿ ವಾಸಕ್ಕೆ ಹೋದ ಸುದ್ದಿ ಕೇಳಿ ಅವನ ಹೃದಯ ಛಿದ್ರವಾಗುತ್ತದೆ. ಅವನು ಹುಚ್ಚನಂತನಾಗುತ್ತಾನೆ. ಅವನು ತನ್ನ ಪ್ರಿಯತಮೆಯ ಆಕೃತಿಯನ್ನು ಕಲ್ಲು ಬಂಡೆಗಳಲ್ಲಿ ಶಿಲ್ಪಕಲೆಯಾಗಿ ರಚಿಸುತ್ತ ಸಮಯ ಕಳೆಯುತ್ತಾನೆ.

ಇತ್ತ ಅಂತಃಪುರದಲ್ಲಿದ್ದ ಮಲ್ಲೀಶ್ವರಿ, ಅನ್ಯಮನಸ್ಕಳಾಗಿ ಕಾಲಕಳೆಯುತ್ತಿರುತ್ತಾಳೆ. ತನ್ನ ಮಾಮನನ್ನ ಮರೆತು ಬದುಕುವುದು ಅವಳು ಊಹಿಸಿಯೂ ಇರಲಿಲ್ಲ. ತಮಾಷೆ ವಿಷಯ ಇಂದು ಇಷ್ಟೊಂದು ಗಂಭೀರವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅವಳನ್ನ ನೋಡಲು ಒಮ್ಮೆ ತಂದೆ ತಾಯಿ ಅರಮನೆಗೆ ಬಂದಾಗ, ಅವರೊಂದಿಗೆ ಸರಿಯಾಗಿ ಮಾತನಾಡದೆ ಅಲ್ಲಿಂದ ಅವರನ್ನ ವಾಪಾಸು ಕಳುಹಿಸುತ್ತಾಳೆ. ಹಣದಿಂದ ಎಲ್ಲವೂ ದೊರಕುವುದಿಲ್ಲ, ನನ್ನ ಮನಸ್ಸಿನ ಭಾವನೆಯನ್ನ ಅರಿಯದೆ ನಮ್ಮಿಬ್ಬರನ್ನ ದೂರ ಮಾಡಿದೆಯಲ್ಲ ನೀನು, ಈಗ ಯಾವ ನೆಮ್ಮದಿಯಿಂದ ನೀನು ಬದುಕುತ್ತೀಯ ನೋಡು, ಮಗಳು ಎಂದು ಇನ್ನೊಮ್ಮೆ ನೋಡಲು ಇಲ್ಲಿಗೆ ಬರಬೇಡ ಎಂದು ತಾಯಿಗೆ ಕೋಪದಿಂದ ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.

 

ಅದೇ ಸಮಯದಲ್ಲಿ, ರಾಯರು ವಸಂತಮಂಟಪವನ್ನು ನಿರ್ಮಿಸಲು ನಿರ್ಧರಿಸುತ್ತಾರೆ. ಅದಕ್ಕಾಗಿ ಪ್ರಧಾನ ಶಿಲ್ಪಿ  ದೇಶ-ವಿದೇಶಗಳಲ್ಲಿರುವ ಶಿಲ್ಪಿಗಳನ್ನು ಸಂಪರ್ಕಿಸುತ್ತಾರೆ. ಆಗ ನಾಗರಾಜು ಮತ್ತು ಅವರ ಶಿಲ್ಪ ಪ್ರಧಾನ ಶಿಲ್ಪಿ ಯ ಕಣ್ಣಿಗೆ  ಬೀಳುತ್ತದೆ. ಪ್ರಧಾನ ಶಿಲ್ಪಿ ಹುಚ್ಚನಂತಾಗಿದ್ದ ನಾಗರಾಜನನ್ನು ಕರೆದುಕೊಂಡು ಹೋಗಿ ಕೆಲಸ ಮುಗಿಸುತ್ತಾರೆ. ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡವನ್ನು ನೋಡಲು ರಾಣಿವಾದ ಕನ್ಯೆಯರನ್ನು ಆಹ್ವಾನಿಸಲಾಗುತ್ತದೆ. ಆ ಶಿಲ್ಪಗಳಲ್ಲಿ ಮಲ್ಲೀಶ್ವರಿ ಸಾಮ್ಯತೆ ಇದೆ ಎಂದು ಕೆಲವರು ಚರ್ಚಿಸುತ್ತಾರೆ. ಅದನ್ನು ಕೇಳಿದ ಜಲಜ ಎನ್ನುವಾಕೆ ಮಲ್ಲೀಶ್ವರಿಗೆ ವಿಷಯ ತಿಳಿಸುತ್ತಾಳೆ. ಆಗ ಮಲ್ಲೀಶ್ವರಿ ಆ ಶಿಲ್ಪವನ್ನ ಬಂದು ನೋಡುಲಾಗಿ ಅದು ತನ್ನ ಸೋದರಮಾವನ ಪ್ರತಿಭೆ ಎಂದು ಭಾವಿಸುತ್ತಾಳೆ. ಅಲ್ಲಿ ಕೆಲಸ ಮಾಡುತಿದ್ದ ತನ್ನ ಸೋದರ ಮಾವನ ಕಂಡು, ಆದರೆ ರಾಣಿವಾಸದ ಕಟ್ಟು ಪಾಡುಗಳ ಅರಿವಿದ್ದ ಜಲಜಾಳ ಎಚ್ಚರಿಕೆಯೊಂದಿಗೆ ಅಲ್ಲಿ ಏನೂ ಮಾತನಾಡದೆ ಹಿಂತಿರುಗುತ್ತಾಳೆ. ಮದ್ಯರಾತ್ರಿ ತುಂಗಭದ್ರಾ ತೀರದಲ್ಲಿ ಇಬ್ಬರನ್ನೂ ಭೇಟಿಯಾಗುವಂತೆ ಜಲಜ ವ್ಯವಸ್ಥೆ ಮಾಡುತ್ತಾಳೆ. ಬಹಳ ದಿನಗಳ ನಂತರ ಭೇಟಿಯಾದ ಈರ್ವರು  ಆನಂದ ತುದಿಲರಾಗುತ್ತಾರೆ. ಮಾತು ಹಾಡು ಹೀಗೆ  ಹರಟುತ್ತ ಸಮಯ ಹೋದದ್ದೇ ತಿಳಿಯುವುದಿಲ್ಲ.  ಮಲ್ಲೀಶ್ವರಿಗೆ ಮತ್ತೆ ರಾಣಿವಾಸಕ್ಕೆ ಹೋಗಬೇಕೆಂದು ಅನಿಸುವುದೇ ಇಲ್ಲ. ಆದರೂ ಹೋಗಲೇ ಬೇಕಾದ ಪರಿಸ್ಥಿತಿ, ಮನಸ್ಸಿಲ್ಲದ ಮನಸ್ಸಿನಲ್ಲಿ ಮರಳಿ ಹೊರಡುತ್ತಾಳೆ. ಮತ್ತೊಮ್ಮೆ ಅವರು ಮತ್ತೆ ಭೇಟಿಯಾಗಲು ನಿರ್ಧರಿಸುತ್ತಾರೆ. ಆ ದಿನ ಅದೇ ಸಮಯದಲ್ಲಿ ರಾಣಿಯವರು ಮಲ್ಲೀಶ್ವರಿಯವರ ನೃತ್ಯವನ್ನು ಮನರಂಜನೆಗಾಗಿ ನೋಡಬೇಕೆಂದು ಬಯಸುತ್ತಾರೆ.

 

ಮಲ್ಲೀಶ್ವರಿ, ನಿಗದಿತ ಸಮಯಕ್ಕೆ ನಾಗರಾಜ್ ಅವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಆಗ ನಾಗರಾಜ ತನ್ನ ಮಲ್ಲೀಶ್ವರಿ ಏನಾಯಿತೆಂದು ತಿಳಿಯುವ ಆತಂಕದಲ್ಲಿ ಕಳ್ಳನಂತೆ ಕೋಟೆಯನ್ನು ಪ್ರವೇಶಿಸುತ್ತಾನೆ. ಭಟರು ಅವನನ್ನ ಹಿಡಿಯುತ್ತಾರೆ. ಅದೇ ಸಮಯಕ್ಕೆ ಮಲ್ಲೀಶ್ವರಿ ತನ್ನ ಸೋದರ ಮಾವನ ನೋಡಿದಳು. ಅವನನ್ನ ಬರಲಿಕ್ಕೆ ನಾನೇ ಹೇಳಿದ್ದು ಎನ್ನುತ್ತಾಳೆ. ಮಲ್ಲೀಶ್ವರಿಗೆ ಎಲ್ಲಿ ಶಿಕ್ಷೆಯಾಗುತ್ತದೋ ಎಂಬ ಭಯದಿಂದ ನಾಗರಾಜ್, ಆಕೆ ಯಾರೆಂದು ನನಗೆ ಗೊತ್ತಿಲ್ಲ ಎನ್ನುತ್ತಾನೆ. ಆದರೆ, ಮಲ್ಲೀಶ್ವರಿ ಭಟರಿಗೆ ತಾನೇ ನಿಜವಾದ ಅಪರಾಧಿ ಎಂದು ಹೇಳುತ್ತಾಳೆ. ಇಲ್ಲಿ ಏನೋ ಸಮಸ್ಯೆ ಇದೆ ಅರಿತ ಅರಮನೆಯ ಭಟರು ಇಬ್ಬರನ್ನ ಬಂಧಿಸುತ್ತಾರೆ. ಇಬ್ಬರೂ ಜೈಲು ಪಾಲಾಗುತ್ತಾರೆ. ಇಬ್ಬರಿಗೂ ಮರಣದಂಡನೆ ವಿಧಿಸಲಾಗುತ್ತದೆ. ಈವಿಷಯ ಜಲಜಾಳಿಗೆ ಗೊತ್ತಾಗಿ ಅವಳು ರಾಣಿ ತಿರುಮಲಾಂಬರಿಗೆ ಮಲ್ಲೀಶ್ವರಿ ಮತ್ತು ನಾಗರಾಜು ಪ್ರೇಮಕಥೆಯನ್ನು ಹೇಳುತ್ತಾಳೆ.  ಜಲಜಾ ಮೂಲಕ ವಿಷಯ ತಿಳಿದುಕೊಂಡ ರಾಣಿ ತಿರುಮಲಾಂಬ ದೇವಿ ಶ್ರೀ ಕೃಷ್ಣ ದೇವರಾಯರಿಗೆ ವಿಷಯ ತಿಳಿಸುತ್ತಾರೆ. ಅದರೊಂದಿಗೆ ರಾಯರು, ಮಲ್ಲೀಶ್ವರಿ ಮತ್ತು ನಾಗರಾಜ್ ಅವರನ್ನು ಸಭೆಗೆ ಕರೆಯುತ್ತಾರೆ.

 

ನಾಗರಾಜು ಮತ್ತು ಮಲ್ಲೀಶ್ವರಿ ತಪ್ಪನ್ನ ತಮ್ಮ ಮೇಲೆ ಹಾಕಿ ಕೊಂಡು ಒಬ್ಬರು ಇನ್ನೊಬ್ಬರನ್ನ ಕಾಪಾಡಲು ಸುಳ್ಳು ಹೇಳುತ್ತಾರೆ.  ಆಗ ರಾಯರಿಗೆ ರಾಣಿವಾಸವೇ ಕಾರಣ ಎಂದು ಮನದಟ್ಟಾಗುತ್ತದೆ.

ನಾಗರಾಜುವಿಗೆ, ಮಲ್ಲೀಶ್ವರಿಗೆ  ರಾಣಿವಾಸಕ್ಕಾಗಿ ಆಹ್ವಾನ ನೀಡಿ ಅಂತ ಹೇಳಿದ್ದೆಯಲ್ಲ? ಅದಕ್ಕಾಗಿ ಪಲ್ಲಕ್ಕಿಗೆ ಕಳುಹಿಸಿದ್ದು ತಪ್ಪಾ ಎಂದು ರಾಯರು ಕೋಪದಿಂದ ಪ್ರಶ್ನಿಸುತ್ತಾರೆ. ಆಗ ನಾಗರಾಜು, ಅಂತಹ ಧೈರ್ಯ ನಮಗೆಲ್ಲಿಂದ ಬರಬೇಕು ಸ್ವಾಮಿ ಎಂದು ವಿನಮ್ರನಾಗಿ ಕೇಳುತ್ತಾನೆ. ಆಗ ರಾಯರು, ಸರಿಯಾಗಿ ಜ್ನಾಪಿಸಿಕೊ ನೀನು ಕೇಳಿಲ್ಲವೇ? ಎನ್ನುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಕವಿ ಅಲ್ಲಸಾನಿ ಪೆದ್ದನ್ನನ್ನ ಗುರುತುಹಿಡಿದ. ಆಗ ಹಿಂದಿನ ಘಟನೆ ನೆನಪಾಗಿ, ತಪ್ಪು ನನ್ನದೇ ಸ್ವಾಮಿ. ನಾನೇ ರಾಣಿವಾಸಕ್ಕೆ ಆಹ್ವಾನ ನೀಡಿ ಎಂದು ಕೇಳಿದ್ದೆ. ನನಗೆ ಗಲ್ಲು ಶಿಕ್ಷೆ ನೀಡಿ ಎಂದು ಹೇಳುತ್ತಾನೆ.  ಆಗ ಮಲ್ಲೀಶ್ವರಿ, ಬೇಡ ಬೇಡ ತಪ್ಪು ನನ್ನದು. ನನ್ನಿಂದಾಗಿಯೇ ನನ್ನ ಭಾವ ಕೋಟೆಯೊಳಗೆ ಬರುವಂತಾಯಿತು. ನನಗೆ ಶಿಕ್ಷೆ ನೀಡಿ ಎಂದು ಕೋರುತ್ತಾಳೆ. ಆಗ ರಾಯರು ಸಂಧಿಗ್ದ ಪರಿಸ್ಥಿತಿಗೆ ಒಳಗಾಗುತ್ತಾರೆ.  ಕೊನೆಗೆ ತೀರ್ಪು ನುಡಿಯುತ್ತ, ತನ್ನ ಗಾನ ಮತ್ತು ನೃತ್ಯವೈಭವದಿಂದ ತಮ್ಮೆಲ್ಲರನ್ನ ಸಂತಸ ಪಡಿಸಿದ ಮಲ್ಲೀಶ್ವರಿಯನ್ನ ಮತ್ತೆ ತನ್ನ ಅದ್ಭುತ ಶಿಲ್ಪಕಲೆಯಿಂದ ವಸಂತ ಮಂಟಪಕ್ಕೆ ಒಂದು ಸುಂದರ ಕಳೆಯನ್ನ ತಂದುಕೊಟ್ಟ ನಾಗರಾಜನನ್ನ ಕ್ಷಮಿಸಿ ಈರ್ವರನ್ನ ಬಂಧನದಿಂದ ಬಿಡುಗಡೆ ಗೊಳಿಸುತಿದ್ದೇವೆ ಎಂದು ಆದೇಶಿಸುತ್ತಾರೆ. ಶ್ರೀಕೃಷ್ಣದೇವರಾಯರ ಈ ಔದಾರ್ಯವನ್ನ ನೆನೆದು ಕೃತಜ್ನತೆಯನ್ನ ಸಲ್ಲಿಸಿ ಈರ್ವರು ತಮ್ಮ ಸ್ವಂತ ಊರಿಗೆ ಮರಳುತ್ತಾರೆ. ಅಲ್ಲಿ ಮದುವೆಯಾಗಿ ಮುಂಚಿನಂತೆ ಹಾಡುತ್ತ ನಲಿಯುತ್ತಾರೆ. ಇಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ.

 ಮಲ್ಲೀಶ್ವರಿ ಚಿತ್ರವು 1951 ರಲ್ಲಿ ಬಿಡುಗಡೆಯಾದರೂ, ಚಿತ್ರದ ಪರಿಕಲ್ಪನೆಯು 1939 ರಲ್ಲಿಯೇ ಹುಟ್ಟಿಕೊಂಡಿತು. ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಬಿ.ಯನ್ ರೆಡ್ಡಿಯವರು ಹಂಪಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ವಿರೂಪಾಕ್ಷ ಸ್ವಾಮಿ ದೇವಸ್ಥಾನದಲ್ಲಿ ದೇವರನ್ನು ಪ್ರಾರ್ಥಿಸುತ್ತಿರುವಾಗ ಅವರ ಮನಸ್ಸಿನಲ್ಲಿ ಒಂದು ಆಲೋಚನೆ ಬರುತ್ತದೆ. ಶ್ರೀಕೃಷ್ಣದೇವರಾಯನು ಸಹ ಇದೇ ರೀತಿಯಲ್ಲಿ ದೇವಸ್ಥಾನದಲ್ಲಿ ಸ್ವಾಮಿಯನ್ನು  ಪೂಜಿಸಿರಬಹುದಲ್ಲವೇಆಗ ಕೃಷ್ಣದೇವರಾಯರ ಆಡಳಿತದ ಹಿನ್ನೆಲೆಯಲ್ಲಿ ಸಿನಿಮಾ ಮಾಡುವ ಯೋಚನೆ ಆಗ ಬಿ.ಯನ್‌. ರೆಡ್ಡಿಯವರಿಗೆ ಬರುತ್ತದೆ.

ಚಿತ್ರೀಕರಣದ ನಂತರ ಮದ್ರಾಸಿಗೆ ಮರಳಿ ಬಂದಾಗ ಖ್ಯಾತ ಬರಹಗಾರ ಬುಚ್ಚಿಬಾಬು ಅವರು ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಬರೆದ ಕರುಣಾಕೃತ್ಯಂ ಎಂಬ ಕಥೆ ಅವರನ್ನ ಆಕಷಿಸುತ್ತದೆ.

ಆ ನಂತರ ದೇವನ್ ಶರಾರ್  ಸಣ್ಣ ಕಥೆ ದಿ ಎಂಪರೆರ್ ಅಂಡ್ ದ ಸ್ಲೇವ್ ಗರ್ಲ್ ಎನ್ನುವ ಕಥೆಯೂ ಕೂಡ ಅವರನ್ನ ಆಕರ್ಷಿಸುತ್ತದೆ. ಈ ಎರಡು ಕತೆಗಳನ್ನ ಒಗ್ಗೂಡಿಸಿ ಮಲ್ಲೀಶ್ವರಿ ಕಥೆಯನ್ನು ಬಿ.ಯನ್ ಮನದಲ್ಲಿ ರೂಪಿಸಿಕೊಳ್ಳುತ್ತಾರೆ. ಆಗ ಆಂಧ್ರದಲ್ಲಿ ದೇವುಲಪಲ್ಲಿ ವೆಂಕಟಕೃಷ್ಣ ಶಾಸ್ತ್ರಿಗಳು ತಮ್ಮ ಭಾವಪೂರ್ಣ ಕಾವ್ಯದಿಂದ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತಿದ್ದರು. ಹೇಗಾದರೂ ಮಾಡಿ ತನ್ನ ಮಲ್ಲೀಶ್ವರಿಯನ್ನು ಅವರಿಂದ ಬರೆಸಿಕೊಳ್ಳಬೇಕು ಎಂದು ಬಿ.ಯನ್ ಯೋಚಿಸಿ, ದೇವುಲಪಲ್ಲಿ ಅವರನ್ನ ಆಹ್ವಾನಿಸಿದರು. ಆಗ ದೇವುಲಪಲ್ಲಿ ಚಿತ್ರರಂಗಕ್ಕೆ ಬರಲು ಅಷ್ಟಾಗಿ ಉತ್ಸಾಹಿತರಾಗಿರಲಿಲ್ಲ.  ಆದರೆ ಬಿ.ಯನ್.  ರವರ ಮಲ್ಲೀಶ್ವರಿ ಕಥೆ ಕೇಳಿದ ತಕ್ಷಣ ದೇವುಲಪಲ್ಲಿ ಖಂಡಿತ ಚಿತ್ರಕ್ಕಾಗಿ ಬರೆಯುತ್ತೇನೆ ಎಂದು ಭರವಸೆ ನೀಡಿದರು.  ಅಸಲಿಗೆ ಶ್ರೀ ಕೃಷ್ಣ ದೇವರಾಯರು ಸ್ವತಹ ಕವಿಯಾಗಿದ್ದರು, ಕೃಷ್ಣದೇವರಾಯರನ್ನು ತುಂಬಾ ಇಷ್ಟಪಡುವವರು ಕೇವಲ ಯೋಧರು ಧೀರರು ಮಾತ್ರವಲ್ಲದೆ ಸಾಹಿತ್ಯದ ದಿಗ್ಗಜರಿಗೂ ಇಷ್ಟವಾಗುವ ವ್ಯಕ್ತಿತ್ವ. ಆದ್ದರಿಂದ ದೇವುಲಪಲ್ಲಿ ವೆಂಕಟಕೃಷ್ಣ ಶಾಸ್ತ್ರಿಗಳು ತಮ್ಮ ಸಾಹಿತ್ಯವೈಭವದಿಂದ ಮಲ್ಲೀಶ್ವರಿ ಚಿತ್ರವನ್ನ ಸುಂದರ ಪ್ರೇಮಕಾವ್ಯದಂತೆ ರೂಪಿಸುತ್ತಾರೆ. ಆಗಿನ ಸಮಯದಲ್ಲಿ, ನಟಿಯಾಗಿ ಭಾನುಮತಿ ಅವರಿಗೆ "ಸ್ವರ್ಗಸೀಮ" ಚಿತ್ರದ ಮೂಲಕ ಒಳ್ಳೆಯ ಹೆಸರು ಬಂದಿರುತ್ತದೆ. ಆದ್ದರಿಂದ, ಬಿ.ಯನ್.ರೆಡ್ಡಿ ಮರುಮಾತಿಲ್ಲದೆ ಮಲ್ಲೀಶ್ವರಿ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದ್ದರು. ಮತ್ತು ನಾಗರಾಜು ಪಾತ್ರಕ್ಕಾಗಿ ಅವರು ಮೊದಲಿನಿಂದಲೂ NTR ಮನಸ್ಸಿನಲ್ಲಿದ್ದರು. ಅದರಂತೆ NTR ರವರ ಆಯ್ಕೆಯಾಗುತ್ತದೆ. ಕೃಷ್ಣದೇವರಾಯರಾಯರ ಪಾತ್ರಕ್ಕೆ ಶ್ರೀವಾತ್ಸವ ಮತ್ತು ಕವಿ ಅಲ್ಲಸಾನಿ ಪೆದ್ದನ್ನನ ಪಾತ್ರಕ್ಕೆ ನ್ಯಾಪತಿ ರಾಘವರಾವ್ ನಟಿಸುತ್ತಾರೆ.

ಸಾವಿರಾರು ಚಿತ್ರ ನಿರ್ಮಿಸಿರುವ ತೆಲುಗು ಚಿತ್ರರಂಗ ಮತ್ತು ಹಳೆ ತಲೆಮಾರಿನ ತೆಲುಗು ಚಿತ್ರ ಪ್ರೇಮಿಗಳು ಈ ಚಿತ್ರವನ್ನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಪದ್ಮಶಾಲಿ ಸಮಾಜದ ಹಿನ್ನೆಲೆಯನ್ನಿಟ್ಟುಕೊಂಡು ತೆರೆಗೆ ತಂದ ಈ ಅದ್ಭುತವಾದ ಚಲನಚಿತ್ರ ಅಪಾರಮಟ್ಟದ ಲಾಭವನ್ನ ಆದಿನಗಳಲ್ಲಿ ಮಾಡಿದೆ. 






Saturday, November 12, 2022

ಪದ್ಮಶಾಲಿ ಪ್ರತಿಭೆ ಉದಯೋನ್ಮುಖ ಚಿತ್ರ ನಿರ್ದೇಶಕ ಶ್ರೀ ಅವಿರಾಮ್ ಕಂಠೀರವ

ಈ ಭೂಮಿ ಮೇಲೆ ಜನ ಹುಟ್ಟಿದ ಮೇಲೆ ಬಾಳಿ ಬದುಕುವುದಕ್ಕೆ ಒಂದಲ್ಲ ಒಂದು ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ ಎನ್ನುವುದನ್ನ ನಾವೆಲ್ಲರೂ ಕಾಣುತಿದ್ದೇವೆ. ಹುಟ್ಟಿದ ಮೇಲೆ ನಾಲ್ಕು ಜನ ಗುರುತಿಸುವಂತಹ  ಏನ್ ಸಾಧನೆ ಮಾಡಿದೆ ಅಂತ ಪ್ರಶ್ನೆ ಕೇಳಿದರೆ, ಕೆಲಸ ಮಾಡಿಕೊಂಡು ಜೀವನ ನಡೆಸುವುದೇ ಒಂದು ದೊಡ್ಡ ಸಾಧನೆ ಅದಕ್ಕಿಂತ ಬೇರೆ ಏನು ಮಾಡೋಕಾಗುತ್ತೆ? ಏನಾದರು ಮಾಡಬೇಕೆಂದರೆ, ಸಮಯ ಬೇಕು, ಹಣ ಬೇಕು, ಬೆಂಬಲ ಬೇಕು, ಗಾಡ್ ಫಾದರ್ ಬೇಕು, ಹೀಗೆ ಬೇಕು ಬೇಡಗಳ ಪಟ್ಟಿಯನ್ನ ಜನ ತೆರೆಯುತ್ತಾ ಹೋಗುತ್ತಾರೆ. 

ಇಲ್ಲೊಬ್ಬರು ಇದ್ದಾರೆ, ಇವರು ಎಲ್ಲರಂತೆ ಪದವಿ ಪಡೆದು ಕೈಗೆ ಸಿಕ್ಕಿದ ಕೆಲಸ ಮಾಡಿಕೊಂಡು ಇರಬಹುದಿತ್ತು, ಆದರೆ ಸಿನಿಮಾದ ಮೇಲಿನ ಪ್ರೀತಿ, ಸಿನಿಮಾ ರಂಗದಲ್ಲಿ ಏನಾದರು ಸಾಧಿಸ ಬೇಕು ಅಂತ ಕನಸನ್ನ ಹೊತ್ತು ಚಿತ್ರರಂಗದಲ್ಲಿ ಕಾಲಿಟ್ಟು ಹಂತ ಹಂತವಾಗಿ ಬೆಳೆಯುತಿದ್ದಾರೆ ಅವರೇ "ಅವಿರಾಮ್ ಕಂಠೀರವ".

 2018 ರಲ್ಲಿ ತೆರೆಕಂಡ ತಾರಕ್ ಪೊನ್ನಪ್ಪ ಅಭಿನಯದ `ಕನ್ನಡ ದೇಶದೋಳ್' ಚಿತ್ರವನ್ನು ಮತ್ತು . 2021 ರಲ್ಲಿ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರಗಳನ್ನನಿರ್ದೇಶಿಸಿದ  ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಇವರು.

ಇವರು ಪದ್ಮಶಾಲಿ ಸಮಾಜದ ತುಮ್ಮ ಮನೆತನಕ್ಕೆ ಸೇರಿದವರು, ತಂದೆ ತುಮ್ಮ ಶ್ರೀ ಪಿ.ವಿ.ನಾಗಭೂಷಣ್ ಮತ್ತು ತಾಯಿ ಶ್ರೀಮತಿ ನ್ಯಾಯಂ ರಮಾಮಣಿ ದಂಪತಿಗಳ ಪುತ್ರ.  ಊರು ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ. ವಿದ್ಯಾಭ್ಯಾಸ BSC in microbiology. 

ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಹಠ ಹಿಡಿದು, ಯಾವ ನಂಟು, ಯಾವ ಗಾಡ್ ಫಾದರ್ ಇಲ್ಲದೆ ಇದ್ದರು ಮೊದಲಿಗೆ ಸಹಾಯ ನಿರ್ದೇಶಕನಾಗಿ ನಂತರ ಸಹ ನಿರ್ದೇಶಕನಾಗಿ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿ ನಂತರ ಸ್ವತಂತ್ರ ನಿರ್ದೇಶಕನಾಗಿದ್ದಾರೆ ಅವಿರಾಮ್.

ಅವರ ಸಾಧನೆಗಳು ಈ ಕೆಳಗಿನಂತಿವೆ: -

ನಿರ್ದೇಶಿದ ಚಲನಚಿತ್ರಗಳು: - 

1. 2011 ರಲ್ಲಿ ಬಿಡುಗಡೆಯಾದ "ನೂರಾರು ಕನಸು" ಮಕ್ಕಳ ಚಲನಚಿತ್ರ. ( ಸರ್ಕಾರಿ ಶಾಲೆ ಮತ್ತು ಕಾನ್ವೆಂಟ್ ಮಕ್ಕಳ ಮನಸ್ಥಿತಿಯನ್ನು ಸಾರುವ ಚಲನ ಚಿತ್ರ )

2.  2014 ರಲ್ಲಿ "ಅನ್ನದಾತಂ ಶರಣಂ" ಎಂಬ ರೈತರನ್ನು ಶ್ಲಾಘಿಸುವ ದೃಶ್ಯಗೀತೆ‌ಯನ್ನು ರಚಿಸಿ, ನಿರ್ದೇಶನದ ಜೊತೆಗೆ ನಿರ್ಮಾಣ.

3. 2015 ರಲ್ಲಿ " ಇಂಡಿಯಾ ರೇಪ್ಡ್ " ಎಂಬ ಭಾರತದ ಭ್ರಷ್ಟಾಚಾರ ವಿರೋಧಿಸುವ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣ.

4. 2016 ಲ್ಲಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಾಮಾಜಿಕ ಜಾಲತಾಣ Facebook ನಲ್ಲಿ ಧಾರವಾಹಿ ನಿರ್ದೇಶನದ ಜೊತೆಗೆ ನಿರ್ಮಾಣ. 

5. 2018 ರಲ್ಲಿ ಕನ್ನಡ ನಾಡು ನುಡಿಯ ಬಗ್ಗೆ "ಕನ್ನಡ ದೇಶದೊಳ್" ಎಂಬ ಅಪ್ಪಟ ಕನ್ನಡಮಯ ಚಲನಚಿತ್ರ ನಿರ್ದೇಶನದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ದೇಶದೊಳ್ ಅಭಿಯಾನದ ಹಲವಾರು ಕಾರ್ಯಕ್ರಮಗಳ ಆಯೋಜನೆ. 

6. 2021 ರಲ್ಲಿ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರದ ನಿರ್ದೇಶನ. 

7. 2022 ರಲ್ಲಿ ರಾಘವೇಂದ್ರ ರಾಜ್ ಕುಮಾರ್ ರವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ " ಆಪರೇಷನ್ ಯು " ಎಂಬ ಕಮರ್ಷಿಯಲ್ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಚಿತ್ರಕ್ಕೆ ನಿರ್ದೇಶನ. 

8. ಇಲ್ಲಿಯವರೆಗೆ ಕರ್ನಾಟಕದ 13 ಜಿಲ್ಲೆಗಳ ಕುರಿತು ಸರ್ಕಾರದಿಂದ ನಿರ್ಮಾಣ ಆಗಿರುವ ಆಯಾ ಜಿಲ್ಲೆಗಳ ಸಾಕ್ಷ್ಯಚಿತ್ರದ ನಿರ್ದೇಶನ.

2018 ರಲ್ಲಿ ಬಿಡುಗಡೆಯಾದ ಕನ್ನಡ ನಾಡು ನುಡಿಯ ಬಗೆಗಿನ ‘ಕರುನಾಡಲ್ಲಿ ಕನ್ನಡಿಗನೇ ಕಂಠೀರವ’ ಎಂಬ ಅಡಿಬರಹ ಇದ್ದ  "ಕನ್ನಡ ದೇಶದೊಳ್" ಚಲನಚಿತ್ರ , ಚಿತ್ರದಲ್ಲಿ ಇವತ್ತಿನ ಕನ್ನಡ ಯಾವ ಪರಿಸ್ಥಿತಿಯಲ್ಲಿದೆ, ಮುಂದೇನು ಆಗುತ್ತದೆ ಎಂಬುದನ್ನು ಕಮರ್ಷಿಯಲ್ ಮಾದರಿಯಲ್ಲೇ ಚಿತ್ರದಲ್ಲಿ ತೋರಿಸಿದ್ದಾರೆ. ಈ ಸಿನಿಮಾ ಬೆಂಗಳೂರಿನ ಈಗಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ, ಚಿತ್ರದಲ್ಲಿ ಯಾವುದನ್ನೂ ವೈಭವೀಕರಿಸದೆ ಎಲ್ಲವನ್ನೂ ನೈಜವಾಗಿ ತೋರಿಸುವ ಪ್ರಯತ್ನ ಮಾಡಿದ್ದರು. ಕನ್ನಡ ಭಾಷೆಯು ಆಟೋದ ಮೇಲೆ, ಫೇಸ್ಬುಕ್ನಲ್ಲಿ ಚಾಲ್ತಿಯಲ್ಲಿದ್ದರೆ ಸಾಕಾಗುವುದಿಲ್ಲ. ಇದು ಎಲ್ಲಾ ಕಡೆ ಪಸರಿಸಬೇಕು. ಇದಕ್ಕಾಗಿ ಹೋರಾಟ ಮಾಡುವುದನ್ನು ಚಿತ್ರರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದರು. ಸಂಪೂರ್ಣವಾಗಿ ಹೊಸಬರನ್ನೇ ಹಾಕಿಕೊಂಡುಈ ಚಿತ್ರವನ್ನ ನಿರ್ಮಿಸಿದ್ದರು.

2021 ರಲ್ಲಿ ಬಿಡುಗಡೆಯಾದ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರ, ಚಿತ್ರರಸಿಕರ ಮನಗೆದ್ದಿತ್ತು. ಎರಡನೇ ಲಾಕ್ ಡೌನ್ ನಂತರ ಬಿಡುಗಡೆಯಾದ ಮೊದಲ ಚಲನ ಚಿತ್ರ ಕಲಿವೀರ.  ಅದ್ಭುತವಾದ ಮೇಕಿಂಗ್ ನಿಂದ ಅತ್ಯುತ್ತಮ ವಿಮರ್ಶೆಗಳನ್ನ ಈ ಚಿತ್ರ ಪಡೆದಿತ್ತು.  ದಕ್ಷಿಣ ಭಾರತದ ಚಿತ್ರರಂಗದಲ್ಲೇ ಮೊದಲ ಬಾರಿಗೆ ಕಲಿವೀರ ಸಿನಿಮಾದಲ್ಲಿ ರಿಯಲ್ ಸ್ಟಂಟ್ಸ್ ಪ್ರದರ್ಶಿಸಲಾಗಿತ್ತು. OTT ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಲು ಪ್ರಸಿದ್ದ ಕಂಪನಿಗಳು ಸಂಪರ್ಕಿಸಿದ್ದಾರೆ, ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರವನ್ನ OTT ಪ್ಲಾಟ್ ಫಾರ್ಮ್ ನಲ್ಲಿ ನೋಡಬಹುದಾಗಿದೆ. 

ಮುಂದಿನ ಚಿತ್ರ ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಆಪರೇಷನ್ ಯು' ಚಿತ್ರದಲ್ಲಿ ಉತ್ತಮ್ ಪಾಲಿ, ಯಶ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಸೋನಲ್ ಮೊಂಥೆರೋ-ಲಾಸ್ಯ ನಾಗರಾಜ್ ನಾಯಕಿಯರಾಗಿ ನಟಿಸುತಿದ್ದಾರೆ.  ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು. ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. 

ವಿದ್ಮಯಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉದ್ಯಮಿ ಮಂಜುನಾಥ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಆರ್ಮುಗ ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕ ಅವಿನಾಶ್, ಸ್ಪರ್ಶ ರೇಖಾ, ಗೋವಿಂದೇ ಗೌಡ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸುತಿದ್ದಾರೆ.

ಅವಿರಾಮ್ ಅವರು ಪ್ರತಿ ಸಿನಿಮಾದಲ್ಲೂ ಒಂದಲ್ಲ ಒಂದು ಹೊಸ ಪ್ರಯತ್ನವನ್ನ ಮಾಡುತ್ತಾರೆ, ಕನ್ನಡ ದೇಶದೋಳ್ ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿದ್ದರು. ಕಲಿವೀರದಲ್ಲಿ ರಿಯಲ್ ಸ್ಟಂಟ್ಸ್ ಹೊಸ ಬಗೆಯ ಮೋಶನ್ ಪೋಸ್ಟರ್, ಈಗ ಆಪರೇಶನ್ ಯು ಎನ್ನುವ ಹೊಸ ರೀತಿಯ ಚಿತ್ರದ ಹೆಸರು. ಇವರ ಅವಿರತ ಶ್ರಮದಿಂದ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನದನ್ನ ಸಾಧಿಸಲು ಸತತ ಪ್ರಯತ್ನಿಸುತಿದ್ದಾರೆ.

ದೊಡ್ಡ ನಟರ ಜತೆ ಹಾಗೂ ದೊಡ್ಡ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸಮಾಡಲು ಅವಕಾಶಕ್ಕಾಗಿ ಕಾಯುತಿದ್ದಾರೆ,  ಇನ್ನೂ ಹೆಚ್ಚಿನದನ್ನ ಚಿತ್ರರಂಗದಲ್ಲಿ ಸಾಧಿಸುವ ಆಕಾಂಕ್ಷೆ, ಹಂಬಲ ಇವರ ಮನದಲ್ಲಿದೆ. ದೇವರು ಇವರಿಗೆ ಇನ್ನೂ ಹೆಚ್ಚಿನ ಅವಕಾಶವನ್ನ ಕೊಟ್ಟು ದೊಡ್ಡ ಯಶಸ್ಸನ್ನ ಹೆಸರು, ಕೀರ್ತಿ ಗಳಿಸಿ ನಮ್ಮ ಪದ್ಮಶಾಲಿ ಸಮಾಜಕ್ಕೆ ಹೆಸರನ್ನು ತರಬೇಕೆನ್ನುವುದು ನಮ್ಮ ಆಶಯ.





















Tuesday, November 8, 2022

ಪದ್ಮಶಾಲಿ ಪ್ರತಿಭೆ ಅಂತರಾಷ್ಟ್ರೀಯ ಕ್ರೀಡಾಪಟು "ಹೆಚ್.ಎಮ್.ಜ್ಯೋತಿ"

 

ಭಾರತದ ಅಥ್ಲೆಟಿಕ್ಸ್‌ ಕ್ರೀಡಾ ಲೋಕದಲ್ಲಿ ನಮ್ಮ ಪದ್ಮಶಾಲಿ ಸಮಾಜದ ಹೆಮ್ಮೆಯ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಎಚ್‌.ಎಂ.ಜ್ಯೋತಿ ಯವರ ಸಾಧನೆ ಗಮನಾರ್ಹವಾದುದು.  ಇವರು ಹುಟ್ಟಿ ಬೆಳೆದಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ, ಶ್ರೀ ಮಂಜುನಾಥ್‌ ಮತ್ತು ಶ್ರೀಮತಿ ತಿಪ್ಪಮ್ಮ ದಂಪತಿಗಳ  ಪುತ್ರಿ. ತಂದೆ ಕೃಷಿಕರು, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಜ್ಯೋತಿಯವರ ಸಾಧನೆ ಅಪಾರ ಮತ್ತು ಇತರರಿಗೂ ಮಾದರಿ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಲವಾರು ಟೂರ್ನಿಗಳಲ್ಲಿ ಜಯಗಳಿಸಿ ಹಲವು ಪದಕಗಳನ್ನ ಗಳಿಸಿದ್ದಾರೆ.

ಬಹಳ ಮುಖ್ಯವಾಗಿ 2005 ರ ಏಶಿಯನ್ ಟ್ರಾಕ್ ಮತ್ತು ಫೀಲ್ಡ್ ನಲ್ಲಿ ಚಿನ್ನದ ಪದಕ, 2009 ರ ಏಶಿಯನ್ ಗೇಮ್ಸ್ ಕಂಚಿನ ಪದಕ, ಏಶಿಯನ್ ಆಲ್ ಸ್ಟಾರ್ಸ್ ನಲ್ಲಿ ಚಿನ್ನದ ಪದಕ ಮತ್ತು 2010ರಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕಗಳಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ. ಇವರು, 100, 200, 400 ಮೀಟರ್ಸ್‌ ಓಟ ಮತ್ತು 4 x100 ಮೀಟರ್ಸ್‌ ರಿಲೇಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿರುವ ಕೀರ್ತಿಗೂ ಭಾಜನರಾಗಿದ್ದಾರೆ. 100 ಮತ್ತು 200 ಮೀಟರ್ಸ್‌ ಓಟಗಳಲ್ಲಿ ಕ್ರಮವಾಗಿ 11.30 ಹಾಗೂ 23.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕರ್ನಾಟಕದ ಮಟ್ಟಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. 2016ರ ಬೆಸ್ಟ್‌ ಅಥ್ಲೀಟ್‌ ಪ್ರಶಸ್ತಿಯೂ ದೊರೆತಿದೆ. ಭಾರತದ ವೇಗದ ಮಹಿಳೆ ಎಂಬ ಬಿರುದು ಕೂಡ ಜ್ಯೋತಿಯವರಿಗಿದೆ.

ಜ್ಯೋತಿಯವರು ಚಿಕ್ಕವರಿದ್ದಾಗ ಅವರ ಅಕ್ಕ ಸರಿತಾ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆಗ ಅವರಿಗೆ ಸಾಕಷ್ಟು ಬಹುಮಾನಗಳು ದೊರೆಯುತಿದ್ದದನ್ನು ಕಂಡು, ಇವರಲ್ಲೂ ಸಹ ಅಕ್ಕನ ಹಾಗೆ ಬಹುಮಾನ ಗೆಲ್ಲಬೇಕೆಂಬ ಆಸೆ ಚಿಗುರೊಡೆದಿತ್ತು. ಒಮ್ಮೆ ಅವರು ಅಕ್ಕನ ಜತೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅಕ್ಕನನ್ನೇ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಅಲ್ಲಿ ಅವರ ಸಾಮರ್ಥ್ಯ ಕಂಡು ಬಹಳಷ್ಟು ಜನ ಪ್ರಶಂಸೆಯ ಮಾತುಗಳನ್ನಾಡಿದ್ದರು. ಅವರ ಮೆಚ್ಚುಗೆಯೇ ಜೀವನದ ಮುಂದಿನ ಗುರಿಗೆ ಸ್ಫೂರ್ತಿಯಾಯಿತು. 8ನೇ ತರಗತಿಗೆ ಮನೆಯವರು ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಹಾಸ್ಟೆಲ್‌ಗೆ ಸೇರಿಸಿದರು. ಅಲ್ಲಿಂದ ಕ್ರೀಡಾ ಬದುಕಿನ ಪಯಣ ಆರಂಭವಾಯಿತು.

ಕ್ರೀಡಾ ನಿಲಯದಲ್ಲಿದ್ದ ಮಂಜುನಾಥ್‌ ಎನ್ನುವ ಕೋಚ್‌  ಅವರು ಜ್ಯೋತಿಯವರ ಪ್ರತಿಭೆಗೆ ಸಾಣೆ ಹಿಡಿದವರು. ಬಳಿಕ ರವಿ ಅವರೂ ಕೂಡಾ ಹಲವು ಕೌಶಲ್ಯಗಳನ್ನು ಹೇಳಿಕೊಟ್ಟಿದ್ದರು. ಹೀಗೆ ಎಲ್ಲರ ಮಾರ್ಗದರ್ಶನ ದಲ್ಲಿ ಓಟದಲ್ಲಿ ನೈಪುಣ್ಯತೆಯನ್ನ ಸಂಪಾದಿಸಿ ಜೂನಿಯರ್‌ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿದರು. ಕ್ರಮೇಣ ಇವರು ಸೀನಿಯರ್‌ ತಂಡದ ತರಬೇತಿ ಶಿಬಿರಕ್ಕೂ ಆಯ್ಕೆಯಾದರು. 2004ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ ನ 4‌‍X400 ಮೀಟರ್ಸ್‌ ರಿಲೇಯಲ್ಲಿ ಭಾಗವಹಿಸಿ ಚಿನ್ನ ಗೆದ್ದರು. ಅಲ್ಲಿಂದ ಅವರ ಕ್ರೀಡಾ ಬದುಕಿಗೆ ಹೊಸ ತಿರುವು ಸಿಕ್ಕಿತು. ಶಾಲಾ ದಿನಗಳಲ್ಲಿ ಟ್ರಿಪಲ್‌ ಜಂಪ್‌ ಸೇರಿದಂತೆ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದರು. ತುಂಬಾ ಚೆನ್ನಾಗಿ ಓಡುತ್ತಿದ್ದುದರಿಂದ ಇದರಲ್ಲಿಯೇ ಮುಂದುವರಿಯುವಂತೆ ಕೋಚ್‌ಗಳು ಸಲಹೆ ನೀಡಿದ್ದರು. ಹೀಗಾಗಿ ಓಟದಲ್ಲಿ ಗಮನ ಕೇಂದ್ರೀಕರಿಸಿದರು. “100, 200, 400 ಮತ್ತು 4x100 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ. ನಾಲ್ಕೂ ಸ್ಪರ್ಧೆಗಳಲ್ಲೂ ಕಣಕ್ಕಿಳಿಯುವುದು ಆರಂಭದಲ್ಲಿ ತುಂಬಾ ಕಷ್ಟ ಅನಿಸುತ್ತಿತ್ತು ಆದರೆ ಸಾಧನೆಯ ಹಸಿವು ಬಡಿದೆಬ್ಬಿಸುತಿದ್ದರಿಂದ ಕ್ರಮೇಣ ಕಠಿಣ ತಾಲೀಮು ನಡೆಸುವುದಕ್ಕೆ ಒತ್ತು ನೀಡಿದೆ. ಈಗ ಯಾವುದೂ ಸವಾಲು ಅನಿಸುವುದೇ ಇಲ್ಲ. 100 ಮೀಟರ್ಸ್‌ ಓಟ ನನ್ನ ಅಚ್ಚುಮೆಚ್ಚಿನ ವಿಭಾಗ. ಜೊತೆಗೆ ಅಷ್ಟೇ ಭಯ ಕೂಡ. ಬೇರೆ ವಿಭಾಗಗಳಲ್ಲಾದರೆ ಸ್ವಲ್ಪ ಯೋಚಿಸುವುದಕ್ಕಾದರೂ ಸಮಯ ಇರುತ್ತೆ. ಆದರೆ 100 ಮೀಟರ್ಸ್‌ನಲ್ಲಿ ಹಾಗಲ್ಲ. ಈ ವಿಭಾಗದಲ್ಲಿ ಓಡಲು ಗಂಡೆದೆ ಬೇಕು. ಆ ಕ್ಷಣದಲ್ಲಿ ಕ್ಷಿಪ್ರಗತಿಯಲ್ಲಿ ಓಡಿದರಷ್ಟೇ ಪದಕ ಗೆಲ್ಲಲಾಗುತ್ತದೆ.” ಎನ್ನುತ್ತಾರೆ ಜ್ಯೋತಿ.

ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹಾಗೂ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಕಿರಿಯರ ಹಾಗೂ ಹಿರಿಯರ ಅಂತರ್‌ ಜಿಲ್ಲಾ ಅಥ್ಲೆಟಿಕ್‌ ಕ್ರೀಡಾಕೂಟ ಬಾಗಲಕೋಟೆಯಲ್ಲಿ ನಡೆದಿತ್ತು. ಆ ಕ್ರೀಡಾಕೂಟದಲ್ಲಿ ಕಿರಿಯರನ್ನು ಹುರಿದುಂಬಿಸುವುದಕ್ಕಾಗಿ ಆಗ ಪಾಟಿಯಾಲಾದಿಂದ ಮಗಳು ಧೃತಿಯೊಂದಿಗೆ ಆಗಮಿಸಿದ್ದ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿ 100 ಮೀ. ಓಟದಲ್ಲಿ ನಿರೀಕ್ಷೆಯಂತೆ ಚಿನ್ನ ಗೆದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಮಕ್ಕಳಾದ ಮೇಲೆ ಕ್ರೀಡಾಪಟುಗಳು ಸಾಧನೆ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ನನಗೆ ಮಗಳು ಜನಿಸಿದ ನಂತರ ಎರಡು ಪದಕ ಗೆದ್ದಿದ್ದೇನೆ. ಸದ್ಯ ಏಶಿಯನ್‌ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌, ಏಶಿಯನ್‌ ಗೇಮ್ಸ್‌ಗಾಗಿ ಸಜ್ಜಾಗುತ್ತಿದ್ದೇನೆ. ನಮ್ಮಲ್ಲಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ‌ವಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ' ಎಂದರು

ತಂದೆ ಶ್ರೀ ಮಂಜುನಾಥ್‌ ಮತ್ತು ತಾಯಿ ತಿಪ್ಪಮ್ಮ ಅವರ ಬೆಂಬಲದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಇವತ್ತು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇನೆ. ಅವರಿಗೆ ಮಗಳು ದೊಡ್ಡ ಸಾಧನೆ ಮಾಡಬೇಕೆಂಬ ಹಂಬಲ ಇತ್ತು, ಎನ್ನುತ್ತಾರೆ ಜ್ಯೋತಿ. ಪತಿ ಶ್ರೀನಿವಾಸ್‌ ಸಹ ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತ. ಮಾಜಿ ರಾಷ್ಟ್ರೀಯ ಚಾಂಪಿಯನ್! ರಿಲೇ ರಾಷ್ಟ್ರೀಯ ದಾಖಲೆ ಹೊಂದಿದವರು. ಅವರು ಅಥ್ಲೆಟಿಕ್-ಓಟದ ಕೋಚ್‌ ಆಗಿ ಪತ್ನಿಯನ್ನು ಬೆಂಬಲಿಸಿದ್ದಾರೆ. ದಂಪತಿಗೆ ಒಂದು ಚಿಕ್ಕ ಮಗಳಿದ್ದಾಳೆ, ಜ್ಯೋತಿಯವರ ಕ್ರೀಡಾ ಸಾಧನೆಯಸಮಯದಲ್ಲಿ, ಪತ್ನಿಗೆ ಬೆಂಬಲವಾಗಿ ನಿಂತು ಮಗಳನ್ನ ನೋಡಿಕೊಂಡಿದ್ದಾರೆ.  ಸದ್ಯ ಜ್ಯೋತಿಯವರು ಕೆನರಾ ಬ್ಯಾಂಕ್‌ ನಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕ್ರೀಡೆಯಿಂದ ನೀವು ಕಲಿತ ಪಾಠ ಏನು ಎಂದು ಕೇಳಿದರೆ,  ಎಂತಹ ಕಠಿಣ ಸ್ಪರ್ಧೆಯಿದ್ದರೂ ಎಲ್ಲಾ ಸಮಯದಲ್ಲೂ ಧನಾತ್ಮಕವಾಗಿರಬೇಕು,  ಏಕಾಗ್ರತೆ, ಬದ್ಧತೆ, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನ ಕಲಿತಿದ್ದೇನೆ ಎನ್ನುತ್ತಾರೆ.  ಅಕ್ಷರಶಃ ಈ ಮಾತುಗಳು ನಿಜ, ಈ ಮಾತುಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗುವಂತಹದ್ದು.

















#H.M.Jyothi #Jyothi.H.M #ಹೆಚ್.ಎಮ್.ಜ್ಯೋತಿ #ಜ್ಯೋತಿ #padmashali #jyothisrinivas #Karnataka_Padmashali_Samaja





Tuesday, July 19, 2022

Sociable, Selfless Service Provider Dr. K.G Lakshminarayanappa

Sociable, Selfless Service Provider Dr. K.G Lakshminarayanappa




Dr. K. G Lakshminarayanappa is the man who lives his life up to his principles, who belongs to Padmashali community and is serving society without any expectations in return.

He was always interested in literary work and social service, after retirement from the central excise department; he involved himself into social services and started writing articles and columns for well-known newspapers. He raised his voice against injustice through his writing and many of such articles dragged attention.

He was born on 1950 in Kesturu village at Tumakuru district to   Mr. Prananatham shri Gundappa and Mrs. Sanjeevamma. He completed his Primary and secondary education at his birth place Kesturu village. He completed his pre university course at Tumakuru pre-university college; later he graduated from Bangalore Science College and completed MSc from central college. He obtained LLB Degree and DBA from Bangalore University and BCE from Canada.


Dr. K. G Lakshminarayanappa joined the exercise and customs department of the central government of India in 1975. He served in the department for about 35 years. He was appreciated for honesty and excellent service and professionalism by his senior officers. He received good training with regard to his profession and represented the department both at high court and Supreme Court and he got promoted for higher position and he received many awards for his sincere contributions towards his career. He retired in 2010 from his service.

Agonist for languages and clime (Born fighter)

Lakshminarayanappa always involved himself to resolve issues related to language and literature of our state. During college days he was the president for Kannada Sangha and was secretary for kalasangha. While studying LLB He formed and developed Kannada organisation inside as well as outside the campus. He joined with Jayaprakash Narayan for many movements and expressed his ideology. He had good relationships with P. Lankesh, Comic litterateur ‘Bichi’, Chidananda murthy and many critics. He was well known as “ke.gu.la” for his pen name. Many of his poems and articles aired in Doordarshan and Akashvani. He is well known for his campaign for Kannada language along with Dr. Siddalingaiah, Chiranjeevi Alva,D.R Nagaraj. He shared platforms with popular poets and writers like H.S Venkatesh murthy, K.S Narasimha murthy, Ramachandra Sharma, N.S Lakshminarayana Bhat. Shri. Ramalingam Reddy and H. S. Revanna were Classmates and still in good relationship with Dr. Laksminarayanappa.

Religious and sociable

Dr. Lakshminarayanappa’s interest for social service made him to join hand with many organisations. He became secretary for Akila Bharata Padmashali sangha at Hyderabad and was president for Bangalore district Padmashali employee’s organisation, Karnataka Yuva Sahithya Parishath and central Kannada organisation. At present he is serving as Dharmdarshi for Shri Lakshmi Narayana temple located at Balepete Bangalore, he is serving as Dharmadarshi as well as treasurer at Shri Markandeya Maharshi gurupeeta of Karnataka state Nekara community, along with that he’s serving as chief secretary at devarayadurga Lakshmi Narayana committee and as Vice President at Shibhi Lakshminarasimha temple.

Apart of this he opened “A.S.R infinity law chambers” to help financially backward people by providing free law service. Recently he opened “KGL Padmashali IAS UPSC academy” for IAS aspirants and adopted orphan girls to provide education by helping them financially. He always donated 10% of his salary for the education of poor students from his career days.

Columnist and writer

Though he had no degree in literature nor did he do any research still he showed interest in literary work and did research and did opus on Devarayana Durga and Tumakuru jilleya Divya Kshethragalu. Late Shri M. Chidanand murthy wrote the foreword of this book. Lakshminarayanappa has given clear narration in this book and the language is very simple and facts are perfectly written, said late Shri Dr. M. Chidanand Murthy.

In my opinion this book of Dr. K. G Lakshminarayanappa is successful in providing wide aspects of major temples of Tumakuru as well as culture in subtle way.

As a writer, social worker, thinker, being the follower of Gandhi and J.P Lohia by adopting their ideology and principles he is completely active in literary and social activities. Dr. K.G Lakshminarayanappa is simple, active, disciplined, with principles and honesty has been awarded for his literary service as Nekararatna by Nekaravani Magazine. He received many awards from many organisations. Recently he has been awarded by Kesturu Nethaji brigade group as Hutturu sandaka 2019 from Kesturu village which is his hometown. He had joined hands with Kesturu Nethaji brigade group for the development of Kesturu village by planting lakhs of trees.

Dr. Lakshminarayanappa has written many poems and articles and Columns to many magazines.

After the retirement from his service he did research on the temples of Tumakuru and wrote detailed scripture on them which are named as Tumakuru jilleya Pramuka devalayagalu ondu adyayana with the support and Encouragement by Dr. M Chidanand murthy and under my direction. He presented an Essay on this subject to Tumakuru University for de lit and received Doctorate from the university. He is the first researcher out of 12 lakh Padmashali community and 4th researcher out of 60 lakh weavers community to receive doctorate degree.

I heartily congratulate Dr. K.G Lakshminarayanappa the columnist, social worker, thinker, honest and principled man for his achievement.

-          Prof. Mallepuram G.Venkatesh, Retired chancellor.

 

Dr. K.G Lakshminarayanappa has written more than 500 articles and more  than  750 poems .

Considering his achievements, Karnataka govt has appointed him as  Advisory member of Hampi University.

Considering his contributions, many public organizations has given many awards lik,e Nekara Rathna  Award,  Samantha Award SADAKARA RATNA  AWARD and many  facilitation has done by them















#KGL #KGlakshminarayanappa #K.G.lakshminarayanappa #ಕೆ.ಜಿ.ಲಕ್ಷ್ಮಿನಾರಾಯಣಪ್ಪ

#padmashali